ಜಾಲ್ಸೂರು: ದಿ. ಭಾಸ್ಕರ ‌ಬೆಳ್ಚಪ್ಪಾಡರಿಗೆ ನುಡಿನಮನ ಸಲ್ಲಿಕೆ

0

ಇತ್ತೀಚೆಗೆ ನಿಧನರಾದ ಜಾಲ್ಸೂರು ಗ್ರಾಮದ ಮಹಾಬಲಡ್ಕ ನಿವಾಸಿ ದಿ. ಭಾಸ್ಕರ ಬೆಳ್ಚಪ್ಪಾಡ ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಜು.21ರಂದು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.

ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು ಅವರು ದಿ. ಭಾಸ್ಕರ ಬೆಳ್ಚಪ್ಪಾಡ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿ. ಭಾಸ್ಕರ ಬೆಳ್ಚಪ್ಪಾಡ ಅವರ ಪತ್ನಿ ಶ್ರೀಮತಿ ಯಶೋದ, ಪುತ್ರರಾದ ನವೀನ್ ಕುಮಾರ್ ಮಹಾಬಲಡ್ಕ, ವಿನೋದ್ ಕುಮಾರ್ ಮಹಾಬಲಡ್ಕ, ಪುತ್ರಿ ಶ್ರೀಮತಿ ಚಿತ್ರಾಕ್ಷಿ ಮಹಾಬಲಡ್ಕ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.