ಸುದ್ದಿ ವರದಿ ಫಲಶುೃತಿ, ಕುಂಬರ್ಚೋಡು ಹೆದ್ದಾರಿ ಬಳಿಯ ಅಪಾಯಕಾರಿ ಮರ ತೆರವು

0

ಕುಂಬರ್ಚೋಡು :ಮಾಣಿ ಮೈಸೂರು ಹೆದ್ದಾರಿ ಬಳಿ ರಸ್ತೆಗೆ ವಾಲಿಕೊಂಡು ಬೀಳುವ ಸ್ಥಿತಿಯಲ್ಲಿ ಮರವೊಂದು ಅಪಾಯದ ಸ್ಥಿತಿ ಯಲ್ಲಿ ಇರುವ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಸುದ್ದಿ ವೆಬ್ಸೈಟ್ ಮತ್ತು ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.

ಈ ಬಗ್ಗೆ ಜಾಲ್ಸೂರು ಗ್ರಾಮ ಪಂಚಾಯತ್ ನಲ್ಲಿ ಜು.23 ರಂದು ನಡೆದ ಸಭೆಯಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ಗಫೂರ್ ರವರು ವರದಿ ಮತ್ತು ಮಾಹಿತಿಯನ್ನು ನೀಡಿ ವಿಷಯದ ಗಂಭೀರತೆಯ ಬಗ್ಗೆ ಪ್ರಸ್ತಾಪ ಮಾಡಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದು ಇದಕ್ಕೆ ಸ್ಪಂದಿಸಿ ಅವರು ಕೂಡಲೇ ತೆರವು ಗೊಳಿಸಿ ಕೊಡುವ ಭರವಸೆ ನೀಡಿದ್ದು ಸಂಜೆ ವೇಳೆಗಾಗಲೇ ಮರ ತೆರವುಗೊಳಿಸಿ ಸ್ಥಳೀಯರ ಆತಂಕವನ್ನು ದೂರ ಮಾಡಿದ್ದಾರೆ.