ಭಾರೀ ಗಾಳಿ ಮಳೆ: ಕರಿಕ್ಕಳದಲ್ಲಿ ತೆಂಗಿನ ಮರ ಬಿದ್ದು ಹಟ್ಟಿ, ಕೊಟ್ಟಿಗೆಗೆ ಅಪಾರ ಹಾನಿ

0

ಜು.23ರಂದು ರಾತ್ರಿ ಭಾರೀ ಗಾಳಿ ಮಳೆಗೆ ಪಂಜ,ಕರಿಕ್ಕಳ ಮೊದಲಾದ ಕಡೆ ಅಡಿಕೆ ಮರ, ತೆಂಗಿನ ಮರ ಉರುಳಿ ಕೃಷಿಗೆ ಅಪಾರ ಹಾನಿಯಾಗಿರುವ ಘಟನೆ ವರದಿಯಾಗಿದೆ.

ಕರಿಕ್ಕಳದ ಪುಂಡಿಮನೆ ಶ್ರೀಮತಿ ಭಾಗೀರಥಿ ರವರ ಹಟ್ಟಿ ಮೇಲೆ ತೆಂಗಿನ ಮರ ಉರುಳಿದ್ದು ಪಕ್ಕದಲ್ಲಿದ್ದ ಕೊಟ್ಟಿಗೆಗೂ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ. ಹಟ್ಟಿಯಲ್ಲಿದ್ದ ಜಾನುವಾರುಗಳು ಸಣ್ಣ ಗಾಯಗಳಿಂದ ಪವಾಡ ಸದೃಶ ಪಾರಾಗಿವೆ.