ಅಮರಪಡ್ನೂರು : ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷದ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಅಮರಪಡ್ನೂರು ಒಕ್ಕೂಟದ ಶ್ರೀಮತಿ ಸರೋಜಿನಿ ರವರ ಪತಿಯವರಿಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದು ಇದಕ್ಕೆ ಕ್ಷೇತ್ರದ ಸಂಪೂರ್ಣ ಸುರಕ್ಷದ 30000/ ಚೆಕ್ಕನ್ನು ವಿತರಿಸಲಾಯಿತು.
ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಕೆ, ಕೃಷ್ಣಪ್ರಸಾದ್ ಮಾಡಬಾಕೀಲು ಗ್ರಾಮ ಪಂಚಾಯಿತಿ ಸದಸ್ಯರು, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವೀಣಾ ಪಡ್ಫು, ಸೇವಾ ಪ್ರತಿನಿಧಿಯಾಗಿರುವ
ಶ್ರೀಮತಿ ದಿವ್ಯ, ಶ್ರೀಮತಿ ವಸಂತಿ ನೇಣಾರು ಇವರ ಉಪಸ್ಥಿತಿಯಲ್ಲಿ ವಿತರಣೆ
ಮಾಡಲಾಯಿತು.