ಕೆ.ವಿ.ಜಿ. ಪಾಲಿಟೆಕ್ನಿಕ್ : ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ ಕೆ ಯವರಿಗೆ ಬೀಳ್ಕೊಡುಗೆ

0

ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಸುಧಿರ್ಘ ಸೇವೆ ಸಲ್ಲಿಸಿ ಇದೇ ಜುಲೈ 31 ರಂದು ವಯೋ ನಿವ್ರತ್ತಿ ಹೊಂದಲಿರುವ ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ.ಕೆಯವರ ಬಿಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಕಮಿಟಿ “ಬಿ” ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್ ವಹಿಸಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಉಜ್ವಲ್ ಯು ಜೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬೋಧನೆಯ ಮೂಲಕ ಭವಿಷ್ಯ ನಿರ್ಮಾಣಕ್ಕೊಂದು ಮುನ್ನುಡಿ ಬರೆದ ದೇವರಾಜ್ ರವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಸಂಸ್ಥೆಯ ಪ್ರಾಂಶುಪಾಲ ಶ್ರೀಧರ್ ಎಂ ಕೆ ಸನ್ಮಾನಿತರ ಮುಂದಿನ ಜೀವನವು ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಸಿವಿಲ್ ವಿಭಾಗದ ಉಪನ್ಯಾಕರುಗಳಾದ ಹರೀಶ್ ಕುಮಾರ್, ಅನಿಲ್ ಕುಮಾರ್ , ರವಿ ಎಂ.ಆರ್ ಮೆಕ್ಯಾನಿಕಲ್ ವಿಭಾಗದ ಮೇಘರಾಜ್, ಅಧೀಕ್ಷಕ ಧನಂಜಯ ಕಲ್ಲುಗದ್ದೆ ನಿವ್ರತ್ತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಸಿವಿಲ್ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ ಎನ್.ಪಿ. ಸನ್ಮಾನ ಪತ್ರ ವಾಚಿಸಿದರು.

ನಿವ್ರತ್ತರನ್ನು ಎ.ಓ.ಎಲ್.ಇ, ಕೆ.ವಿ.ಜಿ.ಪಾಲಿಟೆಕ್ನಿಕ್ ಹಾಗೂ ಸಿವಿಲ್ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಸಿಬ್ಬಂದಿಗಳಾದ ಜಯಲಕ್ಷ್ಮಿ ಹಾಗೂ ಪದ್ಮಾವತಿ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಸ್ವಾಗತಿಸಿ ಧನಂಜಯ ಕಲ್ಲುಗದ್ದೆ ವಂದಿಸಿದರು, ಶಿಕ್ಷಕ ನಾರಾಯಣ ತೋರಣಗಂಡಿ ನಿರೂಪಿಸಿದರು.