ಬೆಳ್ಳಾರೆ ಯಾದವ ಸಭಾ ಪ್ರಾದೇಶಿಕ ಸಮಿತಿ ಮಹಾಸಭೆ

0

ಯಾದವ ಸಭಾ ಪ್ರಾದೇಶಿ ಸಮಿತಿ ಬೆಳ್ಳಾರೆ ಇದರ ಮಹಸಭೆಯು ಬೆಳ್ಳಾರೆ ಜೇಸಿ ಭವನ ದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಆನಂದ್ ಉಮಿಕ್ಕಳ ವಹಿಸಿದರು.ವೇದಿಕೆಯಲ್ಲಿ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ರಾಜೀವಿ ಪರ್ಲಿಕಜೆ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಕ್ಯಾಪ್ಟನ್ ಸುದಾನಂದ ಮಣಿಯಾಣಿ ಪೆರುವಾಜೆ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಶಶಿಧರ ಮಣಿಯಾಣಿ, ಕೋಶಾಧಿಕಾರಿ ನಾರಾಯಣ ಮಣಿಯಾಣಿ ಬಿಡು,ಜೊತೆ ಕಾರ್ಯದರ್ಶಿ ಶಶಿಪ್ರಭ ಪೆರುವಾಜೆ ಉಪಸ್ಥಿತರಿದ್ದರು.

ಮಹಾಸಭೆಯಲ್ಲಿ 2023 24ನೇ ಸಾಲಿನ ವರದಿಯನ್ನು ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು ವಾಚಿಸಿದರು. 2023-24 ನೇ ಸಾಲಿನ ಲೆಕ್ಕಪತ್ರವನ್ನು ಶಶಿಪ್ರಭ ಪೆರುವಾ ಜೆ ಮಂಡಿಸಿದರು. ನಂತರ ಮುಂದಿನ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅಧ್ಯಕ್ಷರಾಗಿ ಕ್ಯಾಪ್ಟನ್ ಸುಧಾನಂದ ಮಣಿಯಾಣಿ ಪೆರುವಾಜೆ, ಕಾರ್ಯದರ್ಶಿಯಾಗಿ ಸಂತೋಷ ಮಣಿಯಾಣಿ ಭಯಂಬಾಡಿ, ಕೋಶಾಧಿಕಾರಿಯಾಗಿ ಮನ್ವಿತ್ ಧೋಲ್ತೋಡಿ, ಉಪಾಧ್ಯಕ್ಷರಾಗಿ ನಿಶ್ಮಿತಾ ಬೀಡು, ಜೊತೆ ಕಾರ್ಯದರ್ಶಿಯಾಗಿ ದಿವ್ಯ ಆನಂದ್ ಉಮಿಕ್ಕಳ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಶಿಧರ ಮಣಿಯಾಣಿ ಬೀಡು, ನಾರಾಯಣ ಮಣಿಯಾಣಿ ಬೀಡು, ಅಚ್ಯುತ ಮಣಿಯಾಣಿ ನೀಡುಬೆ, ಬಾಲಕೃಷ್ಣ ಮಣಿಯಾಣಿ ಕಲ್ಲೊಣಿ, ವಸಂತ ಮಣಿಯಾಣಿ ಉಮಿಕ್ಕಳ, ಮೋನಿಷಾ ಬಿಡು ಆಯ್ಕೆಯಾದರು. ಸಭೆಯಲ್ಲಿ ಕುಮಾರಿ ಆಶಿಕ ಕಲ್ಲೊ ಣಿ ಯವರು ಪ್ರಾರ್ಥನೆ ಮಾಡಿದರು. ಶಶಿಧರ್ ಮಣಿಯಾಣಿ ಬೀಡು ವಂದನಾರ್ಪಣೆ ಯೊಂದಿಗೆ ಸಭೆ ಮುಕ್ತಾಯವಾಯಿತು.