ಬೆಳ್ಳಾರೆ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸರಿಗೆ ಸನ್ಮಾನ – ಬೀಳ್ಕೊಡುಗೆ

0

ಬೆಳ್ಳಾರೆ ಠಾಣೆಯಲ್ಲಿ 5 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸುಳ್ಯ ಮತ್ತು ಪುತ್ತೂರು ಠಾಣೆಗೆ ವರ್ಗಾವಣೆಗೊಂಡಿರುವ ಪೊಲೀಸರಿಗೆ ಸನ್ಮಾನ ಮತ್ತು ಬೀಳ್ಕೊಡುವ ಕಾರ್ಯಕ್ರಮ ಜು 29 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಾರೆ ಠಾಣಾ ಉಪ ನಿರೀಕ್ಷಕರಾದ ಸಂತೋಷ್ ಬಿ.ಪಿ. ವಹಿಸಿ ವರ್ಗಾವಣೆಗೊಂಡ ಎಲ್ಲಾ ಪೊಲೀಸರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.
ಪುತ್ತೂರು ಠಾಣೆಗೆ ವರ್ಗಾವಣೆಗೊಂಡ ಸತೀಶ ಕೆ,ಚಂದ್ರಶೇಖರ ಗೆಜ್ಜೆಲಿ,ಚಂದ್ರಶೇಖರ ಗೌಡ, ಸುಳ್ಯ ಠಾಣೆಗೆ ವರ್ಗಾವಣೆಗೊಂಡ ಕೃಷ್ಣಪ್ಪ,ರೋಶನ್,ನವೀನ ಕೆ,ಕಾನ್ ಸ್ಟೇಬಲ್ ಗಳಾದ ಬಸವರಾಜ್,ಹಾಲೇಶ ಗೌಡರ್, ಮಂಜುನಾಥ್,ಸಂತೋಷ್,ಲಕ್ಷ್ಮಣದೊಡವಾಟ,ಸತೀಶ್ ನಾಯಕ್,ಮಹಾದೇವ ಪ್ರಸಾದ್,ಶ್ರೀಮತಿ ಜ್ಯೋತಿ ಯವನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸದ ಪೊಲೀಸರು ತಾವು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಬೆಳ್ಳಾರೆ ಠಾಣೆಗೆ ಆಗಮಿಸಿದ ಪೊಲೀಸರನ್ನು ಸ್ವಾಗತಿಸಲಾಯಿತು.
ವೇದಿಕೆಯಲ್ಲಿ ಬೆಳ್ಳಾರೆ ಠಾಣೆಯ ಎಸ್.ಐ.ಸಂತೋಷ್,ಸುಳ್ಯ ಠಾಣೆಯ ಎಸ್‌.ಐ.ಈರಯ್ಯ ದೂಂತೂರು,ಎ.ಎಸ್.ಐ.ಗಳಾದ ದಾಮೋದರ್,ರವೀಂದ್ರ ರವರು ಉಪಸ್ಥಿತರಿದ್ದರು.
ಚೇತನ್ ಸ್ವಾಗತಿಸಿ,ನಿವೃತ್ತ ಎ.ಎಸ್.ಐ.ಭಾಸ್ಕರ ಅಡ್ಕಾರು ಕಾರ್ಯಕ್ರಮ ನಿರೂಪಿಸಿ,ಭವಿತ್ ರೈ ವಂದಿಸಿದರು.