ಬಿದ್ದು ಸಿಕ್ಕ ಮೊಬೈಲ್ ಫೋನ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕನಕರಾಜ ಕಂದಡ್ಕ

0

ಬಿದ್ದು ಸಿಕ್ಕ ಮೊಬೈಲ್ ಫೋನ್ ನನ್ನು ವಾರಿಸುಧಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಜು 30 ರಂದು ಸುಳ್ಯದ ಕಂದಡ್ಕ ದಿಂದ ವರದಿಯಾಗಿದೆ.

ವಳಲಂಬೆ ನಿವಾಸಿ ಮಂಗಳೂರು ವಿಶ್ವ ವಿದ್ಯಾಲಯ ಸಿಬ್ಬಂದಿ ಚನಿಯಪ್ಪ ಎಂಬುವವರು ಜು 20 ರಂದು ರಾತ್ರಿ ದುಗಲಡ್ಕ ಮಾರ್ಗವಾಗಿ ಅವರ ಮನೆಗೆ ಹೋಗುತ್ತಿದ್ದ ಸಂಧರ್ಭ ಅವರ ಮೊಬೈಲ್ ಫೋನ್ ರಸ್ತೆಯಲ್ಲಿ ಬಿದ್ದು ಹೋಗಿದ್ದು ಎಷ್ಟೇ ಹುಡುಕಾಟ ಮಾಡಿದರು ಸಿಗದೆ ಇದ್ದು ಮನೆಗೆ ಹೋಗಿದ್ದರು. ಬಳಿಕ ಮಾರನೇ ದಿನ ಬಂದು ಬೆಳಿಗ್ಗೆ ಮತ್ತೆ ಹುಡುಕಾಟ ಮಾಡಿದ್ದು ಆಗಲು ಮೊಬೈಲ್ ಸಿಕ್ಕಿರಲಿಲ್ಲ.

ಇದೀಗ ಜು 30 ರಂದು ಕಂದಡ್ಕ ನಿವಾಸಿ ಕನಕ ರಾಜ್ ಎಂಬುವವರಿಗೆ ಪರಿಸರದ ರಬ್ಬರ್ ತೋಟದಲ್ಲಿ ಈ ಮೊಬೈಲ್ ಸಿಕ್ಕಿದ್ದು ಅವರು ಅದನ್ನು ಚನಿಯಪ್ಪ ರವರ ಸಹೋದರ ದೇವಿಪ್ರಸಾದ್ ರವರಿಗೆ ಆಸ್ತಾಂತರಿಸಿ ಪ್ರಮಾಣಿಕತೆ ಮೆರೆದಿದ್ದಾರೆ.