ಕುಂಬರ್ಚೋಡು :ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಾಯ ಕಾರಿ ಹೊಂಡ

0

ಕುಂಬರ್ಚೋಡು ಮಾಣಿ
ಮೈಸೂರು ಹೆದ್ದಾರಿ ರಸ್ತೆ ಬಳಿ ಹೊಂಡವೊಂದು ಅಪಾಯಕಾರಿ ಸ್ಥಿತಿಯಲ್ಲಿ ಇದೆ.

ಇತ್ತೀಚೆಗೆ ಜೆಸಿಬಿಯಲ್ಲಿ ಚರಂಡಿ ದುರಸ್ತಿಪಡಿಸುವ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗೆ ಹಾನಿಯಾಗಿದ್ದು ಪೈಪನ್ನು ದುರಸ್ತಿಗೊಳಿಸಿ ಹೊಂಡವನ್ನು ಮುಚ್ಚದೆ ಹೋಗಿರುತ್ತಾರೆ ಎಂದು ಸ್ಥಳೀಯರು ಹೇಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಾದ ಕಾರಣ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುವ ರಸ್ತೆಯಾಗಿದ್ದು ಒಂದಕ್ಕೊಂದು ವಾಹನ ಸೈಡ್ ಕೊಡುವ ಸಂದರ್ಭದಲ್ಲಿ ಗುಂಡಿಗೆ ಬೀಳುವ ಸಂಭವ ಇರುತ್ತದೆ. ಅಲ್ಲದೆ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಈ ಗುಂಡಿ ಅನಾಹುತಕ್ಕೆ ಕಾರಣವಾಗಬಹುದು.

ಆದುದರಿಂದ ಸಂಬಂಧ ಪಟ್ಟವರು ಈ ಅಪಾಯಕಾರಿ ಗುಂಡಿಯನ್ನು ಕೂಡಲೇ ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.