ಕಲ್ಲಪಳ್ಳಿ : ರಸ್ತೆಯ ಮೇಲೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತ- ಸ್ಥಳೀಯರಿಂದ ತೆರವು ಕಾರ್ಯಾಚರಣೆ

0

ಕಲ್ಲಪಳ್ಳಿ ಪಾಣತ್ತೂರು ರಸ್ತೆಯ ಮಧ್ಯೆ ಗುಡ್ಡ ಕುಸಿತಗೊಂಡು ರಸ್ತೆಯ ಮೇಲೆ ಮಣ್ಣು ತುಂಬಿತ್ತು. ಮಣ್ಣಿನೊಂದಿಗೆ ಮರವು ರಸ್ತೆಯ ಮೇಲೆ ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಸ್ಥಳೀಯರು ಸೇರಿ ಮೆಷಿನ್ ಬಳಸಿ ಮರವನ್ನು ತೆರವುಗೊಳಿಸಿ ರಸ್ತೆಯ ಮೇಲಿದ್ದ ಮಣ್ಣು ತೆಗೆದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಕಳೆದ ಮಳೆಗಾಲದಲ್ಲಿಯೂ ಈ ಪ್ರದೇಶದಲ್ಲಿ ಗುಡ್ಡ ಜರಿದು ಸಂಚಾರಕ್ಕೆ ಅಡಚಣೆಯಾಗಿತ್ತು.