ಪಂಜ ರೇಂಜರ್ ಆಗಿ ಶ್ರೀಮತಿ ಸಂಧ್ಯಾ ಎಸ್ ನೇಮಕ

0

ಸಾಮಾಜಿಕ ವಲಯಾರಣ್ಯಾಧಿಕಾರಿ ಶೈಲಜಾ ವರ್ಗಾವಣೆ

ಪಂಜ ವಲಯಾರಣ್ಯಾಧಿಕಾರಿಯಾಗಿ ಶ್ರೀಮತಿ ಸಂಧ್ಯಾ ಎಸ್. ರವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ಶಿವಮೊಗ್ಗ ವನ್ಯಜೀವಿ ವಿಭಾಗದ ಕಾರ್ಗಲ್ ವಲಯದಲ್ಲಿ ವಲಯಾರಣ್ಯಾಧಿಕಾರಿಯಾಗಿದ್ದ ಶ್ರೀಮತಿ ಸಂಧ್ಯಾರವರಿಗೆ ಪಂಜಕ್ಕೆ ವರ್ಗಾವಣೆಯಾಗಿದೆ. ಪಂಜ ರೇಂಜರ್ ಆಗಿರುವ ಗಿರೀಶ್ ಆರ್. ರವರಿಗೆ ಸ್ಥಳ ನಿಯೋಜನೆಗೊಳಿಸಿಲ್ಲ.

ಸುಳ್ಯ ಸಾಮಾಜಿಕ ಅರಣ್ಯ ಇಲಾಖೆಯ ರೇಂಜರ್ ಶ್ರೀಮತಿ ಶೈಲಜಾರವರಿಗೆ ಮಂಡ್ಯ ಪ್ರಾದೇಶಿಕ ವಲಯಕ್ಕೆ ವರ್ಗಾವಣೆಯಾಗಿದೆ. ಇವರು ಮೂರು ವರ್ಷಗಳಿಂದ ಸುಳ್ಯದಲ್ಲಿ ರೇಂಜರ್ ಆಗಿದ್ದರು.

ಸುಳ್ಯದವರಾಗಿದ್ದು ಬೆಳ್ತಂಗಡಿ ಸಾಮಾಜಿಕ‌ ವಲಯಾರಣ್ಯಾಧಿಕಾರಿಯಾಗಿರುವ ಶ್ರೀಮತಿ ವಿದ್ಯಾ ಪಾತಿಕಲ್ಲು ರವರಿಗೆ ಬೆಳಗಾವಿಗೆ ವರ್ಗಾವಣೆಯಾಗಿದೆ.