ಬಿದ್ದು ಸಿಕ್ಕಿದ ಚಿನ್ನದ ಉಂಗುರ ವಾರಸುದಾರರಿಗೆ ಹಸ್ತಾಂತರ

0

ಸುಳ್ಯ ಗಾಂಧಿನಗರದಲ್ಲಿ ರಸ್ತೆ ಬದಿಯಲ್ಲಿ ರಾಕೇಶ್ ಮದುವೆಗದ್ದೆಯವರಿಗೆ ಆ.1ರಂದು ಚಿನ್ನದ ಉಂಗುರ ಬಿದ್ದು ಸಿಕ್ಕಿತ್ತು. ಅದನ್ನು ಅವರು ನ.ಪಂ. ಸದಸ್ಯ ಶರೀಫ್ ಕಂಠಿಯವರಿಗೆ ತಿಳಿಸಿದ್ದರು.‌ಕಂಠಿಯವರು ಸುದ್ದಿಗೆ ಕರೆಮಾಡಿ ತಿಳಿಸಿದ ಮೇರೆಗೆ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಲಾಯಿತು.

ವರದಿ ಪ್ರಚಾರವಾಗುತ್ತಿದ್ದಂತೆ ಉಂಗುರ ಕಳೆದುಕೊಂಡಿದ್ದ ಸುಳ್ಯ ಶಾಂತಿಭವನ ಹೋಟೆಲ್ ಮಾಲಕ ಪ್ರಕಾಶ್ ರವರು ಸುದ್ದಿಗೆ ಕರೆ‌ ಮಾಡಿ ಉಂಗುರ ಕಳೆದುಕೊಂಡಿರುವ ಕುರಿತು ಹೇಳಿಕೊಂಡರು. ಬಳಿಕ ಶರೀಫ್ ಕಂಠಿಯವರು ಉಂಗುರವನ್ನು ಶಾಂತಿಭವನ ಹೋಟೆಲ್ ಗೆ ಹೋಗಿ ಪ್ರಕಾಶರಿಗೆ ಹಸ್ತಾಂತರಿಸಿದರು.