ಸಂಪಾಜೆ: ದಂಡಕಜೆ ಮನೆಯ ಗೋಡೆ ಕುಸಿತಗೊಂಡ ಸ್ಥಳಕ್ಕೆ ಶಾಸಕಿ ಭಾಗೀರಥಿ ಭೇಟಿ

0

ತಡೆಗೋಡೆಗೆ ಅನುದಾನ ಒದಗಿಸಿಕೊಡುವ ಭರವಸೆ

ದ.ಕ. ಸಂಪಾಜೆ ಗ್ರಾಮದ ದಂಡಕಜೆಯಲ್ಲಿ ಭಾರೀ ಮಳೆಗೆ ಮನೆಯ ಹಿಂಬದಿ ಗೋಡೆ ಕುಸಿತಗೊಂಡ ಮಧುಸೂದನ್ ಅವರ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಆ.1ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಂಡಕಜೆಯ ಮಧುಸೂದನ್ ಅವರ ಮನೆಯ ಹಿಂಬದಿಯ ಗೋಡೆ ಜು.29ರಂದು ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು, ಅಡುಗೆ ಕೋಣೆಗೆ ಹಾನಿ ಸಂಭವಿಸಿತ್ತು.

ಶಾಸಕರು ಮನೆಯ ತಡೆಗೋಡೆಗೆ ಅ‌ನುದಾನ ಒದಗಿಸಿಕೊಡುವ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಆಲೆಟ್ಟಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ಸುಧಾಕರ ಬಾಜಿಗದ್ದೆ, ಕೃಷ್ಣಪ್ರಸಾದ್ ಕಾಪಿಲ, ಆನಂದ ಕಲ್ಲುಗುಂಡಿ, ವಿಜಯ ಆಲಡ್ಕ, ಹೇಮಂತ್ ಕಡಪಾಲ, ಸೇರಿದಂತೆ ಮಧುಸೂದನ್ ಅವರ ಮನೆಯವರು ಉಪಸ್ಥಿತರಿದ್ದರು.