ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಆ‌.2 ರಂದು ನಿಧನರಾದ ಗೋವಿಂದ ನಾಯ್ಕ್ ದೊಂಪಗುಡ್ಡೆಯವರ ಮರಣ ಸಾಂತ್ವನ ನಿಧಿ ರೂ.9000/- ವನ್ನು ಮೃತರ ಪತ್ನಿ ಶ್ರೀಮತಿ ಲಲಿತಾ, ಪುತ್ರರಾದ ವೆಂಕಟ್ರಮಣ, ರವಿಕುಮಾರ್ ರವರಿಗೆ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ಆ.2 ರಂದು ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಪಿ.ಎಸ್ ಗಂಗಾಧರ್, ಸುರೇಶ್ ಎಂ.ಎಚ್, ಹರಿಪ್ರಸಾದ್ ಪಾನತ್ತಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಹಾಗೂ ಪದ್ಮಯ್ಯ ನಾಯ್ಕ್ ಚೆನ್ನಡ್ಕ ಉಪಸ್ಥಿತರಿದ್ದರು.