ಪನ್ನೆಬೀಡು ಶ್ರೀ‌ಭಗವತೀ‌ ಕ್ಷೇತ್ರದ ಬಂಧವಿರುವ ರಕ್ತೇಶ್ವರೀ ನಾಗ ಸಾನಿಧ್ಯದಲ್ಲಿ ಸ್ವಚ್ಚತಾ ಕಾರ್ಯ

0

ಸುಳ್ಯದ ಪನ್ನೆಬೀಡು ಶ್ರೀ‌ಭಗವತೀ ಕ್ಷೇತ್ರಕ್ಕೆ ಬಂಧವಿರುವ ರಕ್ತೇಶ್ವರಿ ನಾಗಸಾನಿಧ್ಯದಲ್ಲಿ ಸ್ವಚ್ಚತಾ ಕಾರ್ಯ ಆ.4ರಂದು‌ ನಡೆಯಿತು. ಬಳ್ಳಾಲರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ನೇತೃತ್ವ ವಹಿಸಿದ್ದರು. ಬೂಡು ಕಾಲನಿಯ ಸಾನಿಧ್ಯ ಶಕ್ತಿಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ, ಪದಾಧಿಕಾರಿಗಳಾದ ಪದ್ಮಪ್ಪ, ಶಿವಪ್ಪ, ಪೂವಪ್ಪ, ದಿನೇಶ, ಸುಂದರ, ಪುಟ್ಟಣ್ಣ, ಗಿರೀಶ, ಶೇಖರ, ಪ್ರವೀಣ, ರೋಹಿತ್, ಶಿವರಾಜ, ರಾಜೇಶ್, ಅಜಯ್, ಕುಶಲ, ಗಣೇಶ, ವಿಜಯ ಮೊದಲಾದವರು ಇದ್ದರು.