ಭಾಸ್ಕರ ಆಚಾರ್ಯ ದೇವರಗದ್ದೆ ನಿಧನ

0

ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಕಾಲೋನಿ ನಿವಾಸಿ ಭಾಸ್ಕರ ಆಚಾರ್ಯ ಆ.11 ರಂದು ಹೃದಯಘಾತದಿಂದ ನಿಧನರಾದರು. ಪುತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಹಿಂತಿರುಗುತಿದ್ದಾಗ ಪುತ್ತೂರು ಬಸ್ ನಿಲ್ದಾಣಕ್ಕೆ ತಲುಪಿದಾಗ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ ಆಶಾ ಕಾರ್ಯಕರ್ತೆ ಶೋಭಾ, ಪುತ್ರಿ ಸುಪ್ರಭಾ, ಪುತ್ರ ಸ್ವರೂಪ್, ಸ್ಪುರಣ್, ಸುದೀಪ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ