ಕಲ್ಲಪಳ್ಳಿ :ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿಗೆ ರಾಧಾಕೃಷ್ಣ ಪೆರುಮುಂಡ ಆಯ್ಕೆ

0

ಕಲ್ಲಪಳ್ಳಿ ಗಡಿಪ್ರದೇಶದ ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿಗೆ ರಾಧಾಕೃಷ್ಣ ಪೆರುಮುಂಡ ಆಯ್ಕೆಯಾಗಿರುತ್ತಾರೆ.

ಕೇರಳ ರಾಜ್ಯದಲ್ಲಿ ವರ್ಷಂಪ್ರತಿ ಶ್ರಾವಣ ತಿಂಗಳ ಪ್ರಥಮ ದಿನದಂದು ಕೃಷಿಕರ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದ್ದು ಗ್ರಾಮದಲ್ಲಿ ಅತ್ಯುತ್ತಮ ಕೃಷಿಕರನ್ನು ಗುರುತಿಸಿ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


ಕೃಷಿ ಅಧಿಕಾರಿಯವರು ಗ್ರಾಮದಲ್ಲಿ ಭೇಟಿ ನೀಡಿ ಉತ್ತಮ ಕೃಷಿಕರ ಆಯ್ಕೆ ಪ್ರಕ್ರಿಯೆ ನಡೆಸಿಕೊಡುತ್ತಾರೆ.


ಈ ವರ್ಷದ 2024 ರ ಯುವ ಕೃಷಿಕ ಪ್ರಶಸ್ತಿಯು ರಾಧಾಕೃಷ್ಣ ಪೆರುಮುಂಡ ರವರಿಗೆ ಲಭಿಸಿದೆ.