ಯಾದವ ಸಮಿತಿ ಪ್ರಾದೇಶಿಕ ಸಮಿತಿ ಬೆಟ್ಟ ಆಟಿಟೊಂಜಿ ದಿನ ಹಾಗೂ ಕ್ರೀಡಾಕೂಟ

0

ಯಾದವ ಸಮಿತಿ ಪ್ರಾದೇಶಿಕ ಸಮಿತಿ ಬೆಟ್ಟ ಇದರ ಆಶ್ರಯದಲ್ಲಿ ಆಗಸ್ಟ್ 11ರಂದು ಶ್ರೀ ಶಾರದಾ ಅನುದಾನಿತ ಶಾಲೆ ಬೊಳ್ಳಾಜೆಯಲ್ಲಿ ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಟ್ಟ ಇದರ ಪ್ರಾದೇಶಿಕ ಅಧ್ಯಕ್ಷ ಚಂದ್ರಹಾಸ ಕಿಲಾರ್ಕಜೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಶ್ರೀರಾಮ ಕೊಡಪಾಲ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕಿ ಎ. ವಿ. ಶ್ಯಾಮಲಾ, ಪ್ರಸುತಿ ತಜ್ಞರಾದ ಡಾ. ಶ್ರಿಮತಿ ಗೀತಾ ಶ್ರೀರಾಮ ಮಂಗಳೂರು, ಮುಖ್ಯ ಗುರುಗಳಾದ ಸೀತಾರಾಮ್, ಬೊಳ್ಳಾಜೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಕೊಡಪಾಲ ಉಪಸ್ಥಿತರಿದ್ದರು.

ಯಾದವ ಸಭಾ ಪ್ರಾದೇಶಿಕ ಸಮಿತಿ ಮಹಿಳಾ ಅಧ್ಯಕ್ಷೆ ಸುಮಿತ್ರ ದಿನೇಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಕಿಲಾರ್ಕಜೆ ಸ್ವಾಗತಿಸಿದರು, ಪ್ರಮೋದ್ ಬೊಳ್ಳಾಜೆ ವಂದನಾರ್ಪಣೆ ಗೈದರು, ಕುಮಾರಿ ಗನ್ಹವಿ ಮತ್ತು ಕುಮಾರಿ ಮಾನ್ವಿ ಪ್ರಾರ್ಥನೆ ಗೈದರು, ನಂತರ ವಿವಿಧ ಕ್ರೀಡಾಕೂಟಗಳು ನಡೆಯಿತು.

ಸಂಜೆ ಸಮಾರೋಪದ ಅಧ್ಯಕ್ಷತೆಯನ್ನು ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ ವಹಿಸಿದರು. ವೇದಿಕೆಯಲ್ಲಿ ಬೆಟ್ಟ ರಜಾರಾಮ್ ಭಟ್ ಸದಸ್ಯರು ಭೂ ನ್ಯಾಯ ಮಂಡಳಿ ಸುಳ್ಯ, ನಿವೃತ್ತ ಯೋಧ ಉಮೇಶ ಇಂತಿಕಲ್ಲು, ರಾಜೇಶ್ ಭಟ್ ಬೇರಿಕೆ ಶಾಸ್ತವು ಯುವಕ ಮಂಡಲ ರೆಂಜಾಳ ಶ್ರೀಮತಿ ಸುಮಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶೋಕ್ ಕಿಲಾರ್ಕಜೆ ಸ್ವಾಗತಿಸಿ, ಸವಿತಾ ಕಿಲಾರ್ಕಜೆ ವಂದನಾರ್ಪಣೆ ಗೈದರು.