ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್, ಸುಳ್ಯ ತಾಲೂಕು ಪರಿವಾರ ಕಾನ ಒಕ್ಕೂಟ ಮತ್ತು ಅರಂಬೂರು ಒಕ್ಕೂಟದ ವತಿಯಿಂದ ಶ್ರದ್ಧಾಕೇಂದ್ರದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು.

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಹಾಗೂ ಭಜನಾಮಂದಿರದ ಸುತ್ತ ಮತ್ತು ಮುಂಭಾಗದಲ್ಲಿ ಗ್ರಾನೆಟ್ ಅಳವಡಿಸುತ್ತಿದ್ದು ಈ ಕೆಲಸ ಕಾರ್ಯಕ್ಕೆ ಕೈಜೋಡಿಸಲಾಯಿತು.

ಈ ಸಂದರ್ಭದಲ್ಲಿ ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಪರಿವಾರಕಾನ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಸರಳಿಕುಂಜ, ಒಕ್ಕೂಟದ ಪದಾಧಿಕಾರಿಗಳಾದ ಹಿಮಕರ, ಯೋಗೀಶ, ಜಗದೀಶ್, ಭಜನಾ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಎರಡೂ ಒಕ್ಕೂಟದ ಸದಸ್ಯರುಗಳು, ಆರಂಬರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ವಿಜಯಶ್ರೀ ಪರಿವಾರ ಕಾನ ಒಕ್ಕೂಟದ ಸೇವಾ ಪ್ರತಿನಿಧಿ ಸುರೇಶ್ ಉಪಸ್ಥಿತರಿದ್ದರು.