ಜಟ್ಟಿಪಳ್ಳದಲ್ಲಿ ಸ್ವಾತಂತ್ರ್ಯ ನಡಿಗೆಯ ಸಮಾಲೋಚನಾ ಸಭೆ

0

ಆ.15 ರಂದು ಸುಳ್ಯದಲ್ಲಿ ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ನಡೆಯುವ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸುವ ಕುರಿತು ಸಮಾಲೋಚನಾ ಸಭೆಯು ನಿನ್ನೆ ಸಂಜೆ ಜಟ್ಟಿಪಳ್ಳದ ಯುವಸದನದಲ್ಲಿ ನಡೆಯಿತು.


ಗಾಂಧಿ ಚಿಂತನ ವೇದಿಕೆಯ ಸಂಚಾಲಕರಲ್ಲೊಬ್ಬರಾದ ದಿನೇಶ್ ಮಡಪ್ಪಾಡಿಯವರು ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿ ” ಜಟ್ಟಿಪಳ್ಳದ ಜನತೆ ಕಳೆದ ನಾಲ್ಕು ವರ್ಷಗಳಿಂದ ಹರೀಶ್ ಬಂಟ್ವಾಳ್ ರ ನೇತೃತ್ವದಲ್ಲಿ ಮಾಡುತ್ತಿರುವ ಸ್ವಾತಂತ್ರ್ಯ ನಡಿಗೆ ಈ ಬಾರಿ ನಗರ ಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ನಡೆಯುವುದರಿಂದ ನಾವು ಇಲ್ಲಿಂದ ಅತಿಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕಾಗುತ್ತದೆ ” ಎಂದು ಹೇಳಿದರು.


ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜೆ.ಬಿ., ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಶ್ರೀಮತಿ ಸುನೀತ ರಾಮಚಂದ್ರ,ಬೊಳಿಯ ಮಜಲು ಫ್ರೆಂಡ್ಸ್ ಅಧ್ಯಕ್ಷ ಮನು, ಚೈತನ್ಯ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಧವ ಜಟ್ಟಿಪಳ್ಳ, ಕಪಿಲ ಯುವಕ ಮಂಡಲದ ಮಾಜಿ ಅಧ್ಯಕ್ಷ ಚೇತನ್ ಜಟ್ಟಿಪಳ್ಳ,ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಾಸೀರ್ ಸಿ ಎ,ಶಿಹಾಬ್ ಜೆ.ಎ,ಇಮ್ರಾನ್ ಕೊಡಿಯಾಲ ಬೈಲ್,ಕಪಿಲ ಯುವಕ ಮಂಡಲದ ಕಾರ್ಯದರ್ಶಿ ನಿಕೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ವಂದಿಸಿದರು.