ಹಳೆಗೇಟು ವಸಂತ ಕಟ್ಟೆಯಲ್ಲಿ ಸ್ವಾತಂತ್ಯ ನಡಿಗೆ ಪೂರ್ವಭಾವಿ ಸಭೆ

0

ಆ.15 ರಂದು ಗಾಂಧಿ ಚಿಂತನ ವೇದಿಕೆ ನೇತೃತ್ವದಲ್ಲಿ ಸುಳ್ಯ ನಗರದಾದ್ಯಂತ ನಡೆಯಲಿರುವ ಸ್ವಾತಂತ್ರ ನಡಿಗೆ ಪ್ರಯುಕ್ತ ಸುಳ್ಯ ಹಳೆಗೇಟಿನ ವಸಂತ ಕಟ್ಟೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕರಾದ ಹರೀಶ್ ಬಂಟ್ವಾಳ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಪ್ರತಿ ವಾರ್ಡ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಂಡರು.

ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಗೌತಮ್ ಭಟ್ ವಂದನಾರ್ಪಣೆ ಮಾಡಿದರು.

ಸಭೆಯಲ್ಲಿ ಹಳೆಗೇಟು ವಾರ್ಡ್ ನ.ಪಂ. ಸದಸ್ಯ ಬುದ್ಧ ನಾಯ್ಕ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಶಿವನಾಥ ರಾವ್, ಒಕ್ಕಲಿಗ ಯುವ ಸೇವಾ ಸಂಘದ ಅಧ್ಯಕ್ಷ ಮತ್ತು ಸಾಂಸ್ಕೃತಿಕ ಸಂಘದ ಜೊತೆ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಮಂಜುನಾಥ ಭಜನಾ ಮಂದಿರ ಬೆಟ್ಟಂಪಾಡಿಯ ಪದಾಧಿಕಾರಿ ಹಾಗೂ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪಾಡಿ, ಬೆಟ್ಟಂಅಡಿ ಕೊರಗಜ್ಜ ದೈವಸ್ಥಾನದ ಪ್ರಮುಖರಾದ ಚಿದಾನಂದ ವಿದ್ಯಾನಗರ, ದೇವದಾಸ್, ಕೇಶವ ಹೊಸಗದ್ದೆ, ಗಣೇಶ್ ಕೊಯಿಂಗೋಡಿ, ಜ್ಞಾನೇಶ್ವರ ಶೇಟ್, ಚಿತ್ತರಂಜನ್, ಸುಂದರಿ, ಸಿಂಧೂರ ಶೇಟ್, ಸುನಿಲ್ ಬೆಟ್ಟಂಪಾಡಿ, ಯತಿನ್ ರಾವ್, ಸಚಿನ್ ರಾವ್, ಕಿಶನ್ ಕುಮಾರ್, ಸುರೇಶ್, ಕಾರ್ತಿಕ್, ಶಶಿಧರ್ ಕಜೆ, ದೇವಿಪ್ರಸಾದ್ ಕುದ್ಪಾಜೆ ಮತ್ತಿತರರು ಉಪಸ್ಥಿತರಿದ್ದರು.