ಕೆ.ವಿ.ಜಿ. ಕಾನೂನು ಕಾಲೇಜು: ಸ್ವಾತಂತ್ರ್ಯ ದಿನಾಚರಣೆ

0

ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಆ.15 ರಂದು 78ನೇ ವರ್ಷದ ಸ್ವಾತಂತ್ರ್ಯವೋತ್ಸವನ್ನು ಆಚರಿಸಲಾಯಿತು. ಎ.ಪಿ.ಎಲ್.ಇ ಇದರ ಕಾರ್ಯದರ್ಶಿಯಾದ ಹೇಮನಾಥ್ ಕೆ.ವಿ. ಇವರು ಧ್ವಜಾರೋಹಣ ಮಾಡಿ “ಇಂದಿನ ಯುವ ಜನಾಂಗವು ಕಾನೂನಿನ ಮಹತ್ವವನ್ನು ಅರಿತು ದೇಶದ ಶಕ್ತಿಯಾಗಿ ರೂಪೂಗೂಂಡು ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎ.ಪಿ.ಎಲ್.ಇ ಇದರ ಸಲಹೆಗಾರರಾದ ಪ್ರೊ. ಕೆ.ವಿ. ದಾಮೋದರ ಗೌಡ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಕಾಲೇಜಿನ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.