ಇಂಟೆಕ್ ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿಯವರಿಗೆ ಗೌರವ

0

ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಭರತ್ ಮುಂಡೋಡಿಯವರು ತಮ್ಮ ಕಚೇರಿಯನ್ನು ಮಂಗಳೂರಿನಲ್ಲಿ ಆ.14ರಂದು ಆರಂಭಿಸಿದ್ದು, ಈ ಸಂದರ್ಭ ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ವತಿಯಿಂದ ಭರತ್ ಮುಂಡೋಡಿ ಯವರನ್ನು ಗೌರವಿಸಲಾಯಿತು.

ಇಂಟೆಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ, ಆರೋಗ್ಯ ಸಮಿತಿ ಸದಸ್ಯ ಶಾಹಿದ್ ಪಾರೆ, ಗ್ರಾ.ಪಂ. ಸದಸ್ಯ ಧರ್ಮಪಾಲ ಕೊಯಿಂಗಾಜೆ, ನ.ಪಂ. ಸದಸ್ಯ ರಾಜು ಪಂಡಿತ್ ಮೊದಲಾದವರಿದ್ದರು.