ಕೊಡಗು ಸಂಪಾಜೆ: 78 ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಕೊಯನಾಡು ಶ್ರೀ ಗಣೇಶ್ ಯುವಕ ಬಳಗದಿಂದ ಸ್ವಚ್ಛತಾ ಕಾರ್ಯ

0

ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತೆಯಲ್ಲಿ ಭಾಗಿಯಾದ ಯುವಕರ ತಂಡ

78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ಗಣೇಶ್ ಯುವ ಬಳಗ ತಂಡದಿಂದ ಸಂಪಾಜೆ ಗ್ರಾಮದ ಕೊಯನಾಡು ಸಮೀಪದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಂಪಾಜೆ ಕೊಯನಾಡು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬಸ್ ತಂಗುದಾಣದಲ್ಲಿ ಕಸ , ಕಡ್ಡಿ ಪ್ಲಾಸ್ಟಿಕ್ ಸೇರಿದಂತೆ ಮಲಿನವಾಗಿತ್ತು. ಇದರಿಂದ ಪ್ರಯಾಣಿಕರಿಗೆ, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅಲ್ಲದೇ ಮಳೆ ನೀರು ಸರಾಗವಾಗಿ ಹರಿಯದೆ ನೀರು ರೋಡಿನಲ್ಲಿಯೇ ಹರಿದು ಬಂದು ನಿಲ್ದಾಣ ಹತ್ತಿರವಾಗಿ ಹರಿದಾಡುತ್ತಿತ್ತು. ಇದನ್ನು ಗಮನಿಸಿದ ಶ್ರೀ ಗಣೇಶ್ ಯುವಕ ಮಂಡಲದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುವಕರು ಸೇರಿ ಬಸ್ ತಂಗುದಾಣವನ್ನು ಮತ್ತು ರಸ್ತೆಬದಿಯ ಸೂಚನಾಫಲಕಗಳನ್ನು ಸ್ವಚ್ಚ ಮಾಡಿದರು.ಹಾಗೂ ಚರಂಡಿಗಳಲ್ಲಿ ಕಸ ಕಡ್ಡಿ, ಹೂಳು ಮಣ್ಣು ತುಂಬಿದ್ದು ಚರಂಡಿಗಳನ್ನು ಸ್ವಚ್ಚತೆ ಮಾಡಿನೀರು ಸರಾಗವಾಗಿ ಹೋಗುವಂತೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ಲೋಕೇಶ್ ,ಉಪಾಧ್ಯಕ್ಷರು ಹರ್ಷಿತ್ ಸದಸ್ಯರಾದ ರಂಜನ್ ,ಬಾಲಕೃಷ್ಣ ,ಜಗದೀಶ್ , ಪುರುಷೋತ್ತಮ, ದೇವಿಪ್ರಸಾದ್ ,ಪೃಥ್ವಿ , ಸುಜನ್ ,ನಿಖಿಲ್, ಆನಂದ , ಕಮಲಾಕ್ಷ , ಮಿಥುನ್ ಲೋಕೇಶ್,ಗೋಪಾಲಕೃಷ್ಣ ಶೇಷಪ್ಪ ಮೊದಲಾದವರು ಸ್ವಚ್ಛತೆಯಲ್ಲಿ ಪಾತ್ರರಾದರು.