ಮರ್ಕಂಜದ ರೆಂಜಾಳದಲ್ಲಿ ಭಕ್ತಿ, ಸಂಭ್ರಮದಿಂದ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರ್ಕಂಜ, ಜನಜಾಗೃತಿ ವೇದಿಕೆ ಮರ್ಕಂಜ ಮತ್ತು ಜ್ಞಾನವಿಕಾಸ ಕೇಂದ್ರ ಮರ್ಕಂಜ ಆಯೋಜನೆ

ವರಮಹಾಲಕ್ಷ್ಮೀ ವೃತದಿಂದ ಆರೋಗ್ಯ ಮತ್ತು ನೆಮ್ಮದಿ ವೃದ್ದಿಸಲು ಸಹಕಾರಿ : ಶ್ರೀದೇವಿ‌ ನಾಗಾರಾಜ್ ಭಟ್

ನಾವು ಮಾಡುವ ವೃತ ಆರೋಗ್ಯ ಮತ್ತು‌ ನೆಮ್ಮದಿ ವೃದ್ಧಿಯಾಗಲು ಸಹಕಾರಿ. ಶ್ರದ್ಧೆ ಭಕ್ತಿಯಿಂದ ವರಮಹಾಲಕ್ಷ್ಮೀ ವೃತವನ್ನು ಮಾಡಿದರೆ ನಮ್ಮ‌ ಅಷ್ಟೈಶ್ವರ್ಯ ಲಭಿಸುತ್ತದೆ ಎಂದು ಶ್ರೀ ಕೇಶವ ಕೃಪಾ ಸುಳ್ಯ ಇಲ್ಲಿಯ ಶ್ರೀದೇವಿ ನಾಗರಾಜ ಭಟ್ ಹೇಳಿದರು. ಅವರು ರೆಂಜಾಳದಲ್ಲಿ‌ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ವರಮಹಾಲಕ್ಷ್ಮೀ ಪೂಜೆಯ‌ ಮಹತ್ವವನ್ನು‌ ವಿವರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸಂಪಾಜೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರ್ಕಂಜ, ಜನಜಾಗೃತಿ ವೇದಿಕೆ ಮರ್ಕಂಜ, ಜ್ಞಾನವಿಕಾಸ ಕೇಂದ್ರ ಮರ್ಕಂಜ ಹಾಗೂ ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ‌ ವೇದಮೂರ್ತಿ ಚೈತನ್ಯ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಿತು.

ಬೆಳಿಗ್ಗೆ 8 ಗಂಟೆಗೆ ಸಂಕಲ್ಪ ಹಾಗೂ ಪೂಜಾ ಕಾರ್ಯಕ್ರಮ ಗಳು ಆರಂಭಗೊಂಡಿತು.

ಮಧ್ಯಾಹ್ನ 11.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ಸೋಮಶೇಖರ ಪೈಕ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸಂಪಾಜೆ ವಲಯ ಇವರು ವಹಿಸಿದರು.

ಹರಿಶ್ ಕಂಜಿಪಿಲಿ, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ರೆಂಜಾಳ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನ ಮಿನುಂಗೂರು ಇವರು ಕಾರ್ಯಕ್ರಮ ವನ್ನು‌ ದೀಪ ಬೆಳಗಿಸಿ ಉದ್ಘಾಟಿಸಿದರು.

ಧಾರ್ಮಿಕ ಉಪನ್ಯಾಸವನ್ನು ಶ್ರೀಮತಿ ಶ್ರೀದೇವಿ ನಾಗರಾಜ ಭಟ್, ಶ್ರೀ ಕೇಶವಕೃಪಾ ಸುಳ್ಯ ಇವರು ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಧವ ಗೌಡ, ಯೋಜನಾಧಿಕಾರಿಗಳು ಶ್ರೀ ಕ್ಷೆ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ, ಪುಟ್ಟಣ್ಣ ಗೌಡ, ಸೇವಾ ಸಮಿತಿ ಶ್ರೀ ಕ್ಷೇತ್ರ ರೆಂಜಾಳ, ರಾಘವ ಗೌಡ ಕಂಜಿಪಿಲಿ, ನಿಕಟಪೂರ್ವ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಪಂಚಸ್ಥಾಪನೆ ಮರ್ಕಂಜ ಭಾಗವಹಿಸಿದ್ದರು.

ವೇದಿಕೆಯಲ್ಲಿ ಶ್ರೀಮತಿ ಗೀತಾ ಹೊಸೊಳಿಕೆ, ಅಧ್ಯಕ್ಷರು, ಗ್ರಾಮ ಪಂಚಾಯತ್ ಮರ್ಕಂಜ, ಪದ್ಮನಾಭ ಶೆಟ್ಟಿ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ, ಸತೀಶ್ ರಾವ್ ದಾಸರಬೈಲು ಅಧ್ಯಕ್ಷರು, ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಮರ್ಕಂಜ, ಜಗನ್‌ಮೋಹನ ರೈ ರೆಂಜಾಳ ನಿಕಟಪೂರ್ವ ಜನಜಾಗೃತಿ ವಲಯ ಅಧ್ಯಕ್ಷರು, ಸಂಪಾಜೆ ವಲಯ, ಶ್ರೀಮತಿ ಸರಸ್ವತಿ ಕಕ್ಕಾಡು, ಅಧ್ಯಕ್ಷರು, ವರಮಹಾಲಕ್ಷ್ಮೀ ಸಮಿತಿ ಮರ್ಕಂಜ, ಗೋಪಾಲಕೃಷ್ಣ ಬಲ್ಕಾಡಿ, ಅಧ್ಯಕ್ಷರು, ಪ್ರಗತಿ ಬಂಧು ಸ್ವ. ಸಂ. ಒಕ್ಕೂಟ ಮರ್ಕಂಜ, ರಾಧಾಕೃಷ್ಣ ಅಂಗಡಿಮಜಲು, ಅಧ್ಯಕ್ಷರು, ಪ್ರಬಂಧು ಸ್ವ ಸಂ. ಒಕ್ಕೂಟದ ಶ್ರೀಮತಿ ಲೀಲಾವತಿ ಸೂಟೆಗದ್ದೆ ಅಧ್ಯಕ್ಷರು, ಪ್ರಬಂಧು ಸ್ವ,ಸಂಘ, ರಾಜೇಶ್ವರಿ ಕುಮಾರಸ್ವಾಮಿ ಮಾಜಿ ಸದಸ್ಯರು ವ್ಯವಸ್ಥಾಪನಾ ಸಮಿತಿ ಪಂಚಸ್ಥಾಪನೆಗಳು ಮರ್ಕಂಜ, ಮಹಾಬಲ ಕಟ್ಟೆಕ್ಕೋಡಿ ನಿರ್ದೇಶಕರು ಮರ್ಕಂಜ ಪ್ರಾ.ಕೃ.ಪ.ಸ.ಸಂಘ ಹಾಗೂ ಹೂವಯ್ಯ ಗೌಡ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸಂಪಾಜೆ‌ ವಲಯ ಇವರು ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.

ಮರ್ಕಂಜ ಸೇವಾ ಪ್ರತಿನಿಧಿ ರೋಹಿಣಿ ಸ್ವಾಗತಿಸಿ, ಶಾಸ್ತಾವು ಯುವಕ ಮಂಡಲದ ಜತೆ ಕಾರ್ಯದರ್ಶಿ ಐತ್ತ ರೆಂಜಾಳ ವಂದಿಸಿದರು.

ಸೇವಾಪ್ರತಿನಿಧಿ ನಿತ್ಯಾನಂದ ಭೀಮಗುಳು ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು.

ಒಕ್ಕೂಟದ ಪದಾಧಿಕಾರಿಗಳು, ಧರ್ಮಸ್ಥಳ ಸಂಘದ ಸದಸ್ಯರು, ದೇವಳದ ವಿವಿಧ ಸಮಿತಿಯ ಸದಸ್ಯರು ಕಾರ್ಯಕ್ರಮ ಕ್ಕೆ ಸಹಕರಿಸಿದರು.