ಸುಳ್ಯ : ಅರಿವು ಕೃಷಿ ಕೇಂದ್ರದ ವತಿಯಿಂದ ಆಹಾರೋದ್ಯಮ ಬಗ್ಗೆ ಮಾಹಿತಿ ಕಾರ್ಯಾಗಾರ

0

ಸುಳ್ಯದ ಅರಿವು ಕೃಷಿ ಕೇಂದ್ರದ ವತಿಯಿಂದ ಆಹಾರೋದ್ಯಮ ಪ್ರಾರಂಭಿಸುವವರಿಗೆ ಮತ್ತು ಆಹಾರೋದ್ಯಮ ನಡೆಸುತ್ತಿರುವವರಿಗೆ ಮಾಹಿತಿ ಶಿಬಿರ
ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ಆ. 17 ರಂದು ನಡೆಯಿತು.

ಕ್ಯಾಂಪ್ಕೋದ ಮಾಜಿ ಆಡಳಿತ ನಿರ್ದೇಶಕ ಹೆಚ್.ಎಂ. ಕೃಷ್ಣಕುಮಾರ್ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಆಹಾರ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ, ನಿಯಂತ್ರಕ ಅಗತ್ಯಗಳು, ಗುಣಮಟ್ಟ ನಿಯಂತ್ರಣಗಳು, ಸುರಕ್ಷಿತ ಆಹಾರ ಉತ್ಪಾದನೆಯ ಬಗ್ಗೆ ತರಬೇತಿ ಹಾಗೂ ಅರಿವು ಕಾರ್ಯಾಗಾರ ನಡೆಸಿಕೊಟ್ಟರು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಸುದ್ದಿ ಮಾಹಿತಿ ವಿಭಾಗ ಮುಖ್ಯಸ್ಥ ಕೃಷ್ಣ ಬೆಟ್ಟ ಸೇರಿದಂತೆ ಸುದ್ದಿ ಬಳಗದವರು ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಹಿರಿಯ ವರದಿಗಾರ ಈಶ್ವರ ವಾರಣಾಸಿ ವಂದಿಸಿದರು.