ಗಾಂಧಿನಗರ ಗುರುಂಪು ಪರಿಸರದ ಎರಡು ಮನೆಗಳಿಂದ ಗ್ಯಾಸ್ ಸಿಲಿಂಡರ್ ಕಳ್ಳತನ

0

ಗಾಂಧಿನಗರ ಹಾಗೂ ಗುರುಂಪು ಪರಿಸರದ ಎರಡು ಮನೆಗಳಿಂದ ಆ. 17 ರಂದು ರಾತ್ರಿ ಗ್ಯಾಸ್ ಸಿಲೆಂಡರ್ ಕಳ್ಳತನ ವಾಗಿರುವ ಬಗ್ಗೆ ತಿಳಿದು ಬಂದಿದೆ.

ಗುರುಂಪು ನಿವಾಸಿ ಬಶೀರ್ ಪಿಟ್ಟರ್ ಹಾಗೂ ಗಾಂಧಿ ನಗರ ನಿವಾಸಿ ಮಹಮ್ಮದ್ ಪಿ.ಜಿ ಇವರ ಮನೆಯ ಹಿಂಬದಿಯಲ್ಲಿ ಇಟ್ಟಿದ್ದ ಅಡುಗೆ ಗ್ಯಾಸ್ ಸಿಲಿಂಡರ್ ನು ಕಳ್ಳರು ರಾತ್ರಿ ವೇಳೆ ಹೊದ್ದೋಯ್ದಿದ್ದಾರೆ. ಮನೆಯವರು ಬೆಳಗಿನ ಜಾವ ಅಡುಗೆ ತಯಾರಿಗಾಗಿ ಬಂದಾಗ ಸಿಲಿಂಡರ್ ಕಳ್ಳತನ ಆಗಿರುವ ವಿಷಯ ತಿಳಿದಿದೆ.

ಕೂಡಲೇ ಪೊಲೀಸ್ ದೂರು ನೀಡಲಾಗಿದೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಶೀರ್ ಮನೆಯಿಂದ 2 ಮತ್ತು ಪಿ ಜಿ ಮಹಮ್ಮದ್ ಮನೆಯಿಂದ 1 ಸಿಲಿಂಡರ್ ಕಳವು ಅಗಿದೆ ಎಂದು ತಿಳಿದು ಬಂದಿದೆ.