ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಇದರ ನೂತನ ಆಡಳಿತ ಸಮಿತಿ

0

ಆ.11ರಂದು ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಇದರ ನೂತನ ಆಡಳಿತ ಸಮಿತಿ ರಚನೆಗೊಂಡಿತು.

ಅಧ್ಯಕ್ಷರಾಗಿ ದಯಾನಂದ ಕನ್ನಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜೇಶ ಹಿರಿಯಡ್ಕ ಆಯ್ಕೆಗೊಂಡರು.

ಸ್ಥಾಪಕಾಧ್ಯಕ್ಷರಾಗಿ ಸುರೇಶ್ ಪಾಟಾಳಿ ಕಂದ್ರಪ್ಪಾಡಿ ಹಾಗೂ ಗೌರವಾಧ್ಯಕ್ಷರಾಗಿ ಬಿ ಕೆ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಇವರಿದ್ದಾರೆ.

ಗೌರವ ಸಲಹೆಗಾರರಾಗಿ, ವೆಂಕಟ್ ದಂಬೇಕೋಡಿ, ವೆಂಕಟ್ ವಳಲಂಬೆ, ಶಶಿಧರ ದೇರಾಜೆ, ಕಿಶೋರ್ ಕುಮಾರ್ ಬೊಮ್ಮದೇರೆ .ಮೋಹನ ಕಡ್ತಲ್ ಕಜೆ ಅವರುಗಳು. ಉಪಾಧ್ಯಕ್ಷರುಗಳಾಗಿ ಸತೀಶ್ ಬಂಬುಳಿ ಹಾಲೆಮಜಲು ಹಾಗೂ ಚಂದ್ರಶೇಖರ ಕಡೋಡಿ, ಕೋಶಾಧಿಕಾರಿಯಾಗಿ, ವಿನ್ಯಾಸ್ ಕೊಚ್ಚಿ , ಜೊತೆ ಕಾರ್ಯದರ್ಶಿಯಾಗಿ ಅಚ್ಚುತ ಗುತ್ತಿಗಾರು ಆಯ್ಕೆಯಾದರು.

ನಿರ್ದೇಶಕರುಗಳಾಗಿ ಪರಮೇಶ್ವರ ಚನಿಲ, ನಿತ್ಯಾನಂದ ಕಾಂತಿಲ, ಮೋಹನ್ ಪುಲ್ಲಡ್ಕ, ಲೋಹಿತ್ ಚೆಮ್ನೂರು, ಯತೀಶ ಪಾರೆಪ್ಪಾಡಿ, ರಮೇಶ ಪೂಜಾರಿಕೋಡಿ. ಗಿರೀಶ್ ಮುತ್ಲಾಜೆ, ತುಂಗನಾಥ ಕಮಿಲ, ಸುಧೀರ್ ಅಮೆ, ನವೀನ ಪುಲ್ಲಡ್ಕ , ದಾಮೋದರ ನೂಜಾಡಿ, ಲೋಹಿತ್ ಚೈಪೆ, ಬಿ ಕೆ ಶ್ರೀನಿವಾಸ, ಸುಮಂತ್ ಶೀರಡ್ಕ, ರಮಿತ್ ಹೆಡ್ಡನಮನೆ, ಲೊಕೇಶ್ ಎಣ್ಣೆಮಜಲು, ಶ್ರೆಯಸ್ ಮುತ್ಲಾಜೆ ಇವರುಗಳು ಆಯ್ಕೆಗೊಂಡರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೋಹನ್ ಕಡ್ತಲ್ ಕಜೆ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಅಧ್ಯಕ್ಷರಾದ ಸುರೇಶ್ ಪಾಟಾಳಿ ಕಂದ್ರಪಾಡಿ ಸ್ವಾಗತಿಸಿದರು ‌ ನೂತನ ಅಧ್ಯಕ್ಷರಾದ ದಯಾನಂದ ಕನ್ನಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ. ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವಂದಿಸಿದರು .