ಸುಳ್ಯದ ಅಡ್ಕಾರ್ ಆರ್ಕೇಡ್ ನಲ್ಲಿ ಚರ್ಮರೋಗ ತಜ್ಞ ಡಾ.ಸೂರ್ಯ ಮಲ್ಯ ರವರ ಮಾರಿ ಗೋಲ್ಡ್ ಕ್ಲಿನಿಕ್ ಶುಭಾರಂಭ

0

ಸುಳ್ಯದ ಅಂಬಟೆಡ್ಕದ ಅಡ್ಕಾರ್ ಆರ್ಕೇಡ್ ನಲ್ಲಿ ಚರ್ಮ ರೋಗ ತಜ್ಞರಾದ ಡಾ.ಸೂರ್ಯ ಮಲ್ಯ ರವರ ಮಾರಿಗೋಲ್ಡ್ ಹೌಸ್ ಆಫ್ ಡರ್ಮಟೋಲೋಜಿ ಕ್ಲಿನಿಕ್ ಆ.21 ರಂದು ಶುಭಾರಂಭಗೊಂಡಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆ.ವಿ.ಜಿ.ಆಯುರ್ವೇದ ಕಾಲೇಜಿನಪ್ರಾಂಶುಪಾಲರಾದ ಡಾ.ಲೀಲಾಧರ್ ಡಿ.ವಿ,ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರು, ಶ್ರೀಮತಿ ನಳಿನಿ ಕೃಷ್ಣ ಕಾಮತ್, ಉದ್ಯಮಿ ಸುಧಾಕರ ಕಾಮತ್ ವಿನೋಬನಗರ ಅಡ್ಕಾರ್, ಡಾ.ಕೃಷ್ಣ ಭಟ್ ನೆಡ್ಚಿಲು,ಅಡ್ಕಾರ್ ಆರ್ಕೇಡ್ ಮಾಲಕ ದಿನೇಶ್ ಅಡ್ಕಾರ್, ಯುವ ಉದ್ಯಮಿ ಹರಿ ರಾಯ ಕಾಮತ್ ಅರಂಬೂರು, ಹೇಮಂತ್ ಕಾಮತ್, ಸನತ್ ಆಗ್ರೋ ಸುಳ್ಯ, ಸತೀಶ್ ಕೆ.ಜಿ, ಗುರುದತ್ ಶೇಟ್ , ಅಂಜಲಿ ಮಾಂಟೆಸ್ಸರಿ ಸಂಚಾಲಕಿ ಮತ್ತಿತರರು ಉಪಸ್ಥಿತರಿದ್ದರು.

ಪುರೋಹಿತ ಅಭಿರಾಮ್ ಭಟ್ ರವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹವನವು ನೆರವೇರಿತು.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಕಾಸರಗೋಡಿನಲ್ಲಿರುವ ಮಲ್ಯ ಸಿಟಿ ಆಸ್ಪತ್ರೆಯಲ್ಲಿ ಖ್ಯಾತ ಎಲುಬು ತಜ್ಞರಾಗಿರುವ ಡಾ.ಸುರೇಶ್ ಮಲ್ಯ ಮತ್ತು ಪ್ರಸೂತಿ ತಜ್ಞ ವೈದ್ಯರಾದ ಡಾ. ಮಾಯಾ ಮಲ್ಯ ರವರ ಪುತ್ರರಾಗಿರುವ ಡಾ.ಸೂರ್ಯ ಭಟ್ ರವರು ಸುಳ್ಯದಲ್ಲಿ ಕ್ಲಿನಿಕ್ ತೆರಯುವ ಮೂಲಕ ಎಲ್ಲಾ ರೀತಿಯ ಚರ್ಮರೋಗಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಚರ್ಮದ ಸೌಂದರ್ಯ ಕಾಂತಿಗೆ ಆಧುನಿಕ ತಂತ್ರಜ್ಞಾನದ ಮುಖಾಂತರ ಚಿಕಿತ್ಸೆ ನೀಡುವುದಾಗಿ ತಿಳಿಸಿದರು. ಇವರು ಉದ್ಯಮಿ ಅರಂಬೂರು ಕೃಷ್ಣ ಕಾಮತ್ ರವರ ಮೊಮ್ಮಗ.