ಉಮೇಶ್ ಪೂಜಾರಿ ಕೇನ್ಯರಿಂದ ಹೊಸಬೆಳಕು ಸಂಸ್ಥೆಗೆ ಕೇಶದಾನ

0

ಕೇನ್ಯ ಗ್ರಾಮದ ಐನಡ್ಕ ಎಂಬಲ್ಲಿಯ ಉಮೇಶ್ ಪೂಜಾರಿ ಎಂಬವರು ಪಾಣಾಜೆ ಬಳಿಯ ಆರ್ಲಪದವು ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್‌ಗೆ ಕೇಶದಾನ ಮಾಡಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹೊಸಬೆಳಕು ಸಂಸ್ಥೆ ಕೆಲಸ ಮಾಡುತ್ತಿದ್ದು, ಉಮೇಶ್ ಪೂಜಾರಿಯವರು ಸುಮಾರು ಮೂರು ವರ್ಷಗಳಿಂದ ಬೆಳೆಸಿದ ಸುಮಾರು ಒಂದು ಮುಕ್ಕಾಲು ಪೀಟ್ ಉದ್ದದ ಕೇಶವನ್ನು ದಾನ ಮಾಡಿದರು. ಕೂದಲು ಕತ್ತರಿಸಲು ಬಳ್ಪದ ಅರುಣ್ ಕುಮಾರ್ ಸಹಕರಿಸಿದರು.