ಆ.24:ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣೆ

0

ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥ ಳಗ್ರಾಮಾಭಿವೃಧ್ಧಿಯೋಜನೆ ಬಿ.ಸಿ ಟ್ರಸ್ಟ್‌ ವತಿಯಿಂದ ಆ. 24 ರಂದು *ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪ್ರಗತಿಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಲಿರುವರು.

ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ಡಾ| ರೇಣುಕಾಪ್ರಸಾದ್ ಕೆ.ವಿ ವಿತರಿಸಲಿದ್ದಾರೆ.


ಅತಿಥಿಗಳಾಗಿ ದುಗ್ಗೇ ಗೌಡ ಪ್ರಾದೇಶಿಕ‌ ನಿರ್ದೇಶಕರು, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ಉಡುಪಿ, ಡಾ| ಉಜ್ವಲ್‌ ಯು.ಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೆ.ವಿ.ಜಿ ಸಮೂಹ ವಿದ್ಯಾ ಸಂಸ್ಥೆಗಳು, ರಾಜಣ್ಣ ಕಾರ್ಯ ನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್‌ ಸುಳ್ಯ, ಶ್ರೀಮತಿ ಶೀತಲ್‌ ಯು.ಕೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಂ.ಹೆಚ್‌ ಸುಧಾಕರ್‌ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್‌, ಸರಸ್ವತಿ ಬಿ.ಟಿ ಪೋಲೀಸ್‌ ಉಪನಿರೀಕ್ಷಕರು, ಸುಕುಮಾರ್‌ ಕೋಡ್ತುಗುಳಿ, ಡಾ| ಸುರೇಶ್ ಪ್ರಾಂಶುಪಾಲರು ಕೆ.ವಿ.ಜಿ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಲೋಕನಾಥ ಅಮೆಚ್ಚೂರ್‌ , ಎನ್.ಎ ರಾಮಚಂದ್ರ , ಪ್ರವೀಣ್‌ ಕುಮಾರ್ ಜಿಲ್ಲಾ ನಿರ್ದೇಶಕರು , ಬಾಲಕೃಷ್ಣ ಪುತ್ಯಉಪಸ್ಥಿತರಿರುವುದಾಗಿ ಯೋಜನಾಧಿಕಾರಿ ಮಾಧವ ಗೌಡ ರವರು ತಿಳಿಸಿದರು.