ಬೆಳ್ಳಾರೆ: ಯಾದವ ಸಭಾ ಪ್ರಾದೇಶಿಕ ಸಮಿತಿ ಪೂರ್ವಭಾವಿ ಸಭೆ

0

ಬೆಳ್ಳಾರೆ ಯಾದವಸಭಾ ಪ್ರಾದೇಶಿಕ ಸಮಿತಿಯ ವತಿಯಿಂದ ನಡೆಸಲ್ಪಡುವ , ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರ ಬಗ್ಗೆ ಪೂರ್ವಭಾವಿ ಸಭೆಯು ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಕಚೇರಿಯಲ್ಲಿ ಆ.25ರಂದು ನಡೆಯಿತು.

ವೇದಿಕೆಯಲ್ಲಿ ಅಧ್ಯಕ್ಷ ಸುದಾನಂದ ಮಣಿಯಾಣಿ ಪೆರುವಾಜೆ ,ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಬೆಳ್ಳಾರೆ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಸಂತೋಷ್ ಮಣಿಯಾಣಿ ಬಾಯಂಬಾಡಿ , ಜೊತೆ ಕಾರ್ಯದರ್ಶಿ ಶ್ರೀಮತಿ ದಿವ್ಯ ಲತಾ ಉಮಿಕ್ಕಳ , ಕೋಶಾಧಿಕಾರಿ ಮನ್ವಿತ್ , ಉಪಾಧ್ಯಕ್ಷೆ ನಿಶ್ಮಿತ ಬೀಡು, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಬಾಳಿಲ, ಉಪಾಧ್ಯಕ್ಷೆ ಶ್ರೀಮತಿ ವಾರಿಜಾ ಬೊಳಿಯಕಂಡ ಉಪಸ್ಥಿತರಿದ್ದರು.

ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಚಂದ್ರಹಾಸ ಮಣಿಯಾಣಿ , ಸಂತೋಷ್ ಮಣಿಯಾಣಿ ಬೀಡು,ಶಶಿಧರ ಮಣಿಯಾಣಿ, ಕುಂಞಿರಾಮ ಮಣಿಯಾಣಿ ಅವರು ಉಪಸ್ಥಿತರಿದ್ದರು.