ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯು ಆ.26ರಂದು ಜರುಗಿತು.

ಬೆಳಿಗ್ಗೆ ನಿವೃತ್ತ ಉಪನ್ಯಾಸಕ ಎಂ. ಶಾಂತರಾಮ ಹೊಸಗದ್ದೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು ರುಕ್ಮಯ್ಯ ಗೌಡ ಸುತ್ತುಕೋಟೆ, ಜಾಲ್ಸೂರು ಗ್ರಾ.ಪಂ. ಸದಸ್ಯರಾದ ಶಿವಪ್ರಸಾದ್ ನೀರಬಸಿರು, ಶ್ರೀಮತಿ ದೀಪಾ ಅಜಕಳಮೂಲೆ ಉಪಸ್ಥಿತರಿದ್ದರು.

ಬಳಿಕ ಸಾರ್ವಜನಿಕ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.
ಪುರುಷರಿಗೆ ಲಕ್ಕೀಗೇಮ್, ಮೊಸರು ಕುಡಿಕೆ, ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ತೆಂಗಿನ ಕಾಯಿ ಕುಟ್ಟುವುದು, ಹಗ್ಗಜಗ್ಗಾಟ, ಚೆನ್ನಮಣೆ ಹಾಗೂ ಮಹಿಳೆಯರಿಗೆ ಹಣತೆ ಹಚ್ಚುವುದು, ಮೊಸರು ಕುಡಿಕೆ, ಲಕ್ಕೀಗೇಮ್, ಹಗ್ಗಜಗ್ಗಾಟ, ಚೆನ್ನಮಣೆ ಸ್ಪರ್ಧೆಗಳು ಜರುಗಿತು.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸೋಣಂಗೇರಿ ಹಾಗೂ ಕುಕ್ಕಂದೂರು ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.