ಸುಳ್ಯ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳ ಉದ್ಘಾಟನೆ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ಸೆ.7 ರಿಂದ 11 ರ ತನಕ ನಡೆಯಲಿರುವ 56 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಸೆ.1 ರಂದು ಜರುಗಿತು.

ಕಸ್ತೂರಿ ನರ್ಸರಿ ಮಾಲಕ ಮಧುಸೂದನ್ ಕುಂಭಕೋಡು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್,ದೇವತಾರಾಧನಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಗೌರವಾಧ್ಯಕ್ಷ ಸೋಮನಾಥ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾಮಧುಸೂಧನ್, ಪದಾಧಿಕಾರಿಗಳಾದ ಮಾಧವ ಗೌಡ ಮಡಪ್ಪಾಡಿ,ಕಾರ್ಯದರ್ಶಿ ಭರತ್ ಪಿ.ಯು, ಜನಾರ್ದನ ದೋಳ, ಸ್ಪರ್ಧಾ ಸಂಚಾಲಕ ದಾಮೋದರ ಮಂಚಿ, ಗಿರೀಶ್ ಕಲ್ಲುಗದ್ದೆ, ಉಪಸ್ಥಿತರಿದ್ದರು. ಸಂಚಾಲಕ ಶಶಿಧರ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಚಿತ್ರಕ್ಕೆ ಬಣ್ಣ ತುಂಬುವುದು, ಕನ್ನಡ ದುಂಡಕ್ಷರ ಸ್ಪರ್ಧೆ, ಗಣಪತಿ ಚಿತ್ರ ಬಿಡಿಸುವುದು. ಭಕ್ತಿ ಗೀತೆ ಸ್ಪರ್ಧೆ,ಮಹಳೆಯರಿಗೆ ಸಂಗೀತ ಕುರ್ಚಿ, ಯುವಕರಿಗೆ ಗೋಣಿ ಚೀಲ ಓಟ, ಚೇಳಿನ ಓಟ, ಹಣತೆ ಉರಿಸುವ, ಮಡಕೆ ಒಡೆಯುವ ಸ್ಪರ್ಧೆ ಗಳನ್ನು ಹಮ್ಮಿಕೊಳ್ಳಲಾಯಿತು.