ಎಡಮಂಗಲ: ಸಂಘಸಂಸ್ಥೆಗಳ ಸಹಕಾರದೊಂದಿಗೆ ಊರವರಿಂದ ಮಾಲೆಂಗಿರಿ ತಾತ್ಕಾಲಿಕ ಸೇತುವೆ ನಿರ್ಮಾಣ, ಬಸ್ ಸಂಚಾರ ಆರಂಭ

0

ಸಂಪರ್ಕ ಕಳೆದುಕೊಂಡ ಎಡಮಂಗಲ ಸಂಪರ್ಕಿಸುವ ಮಾಲೆಂಗಿರಿ ಸೇತುವೆ ವಿವಿಧ ಸಂಘ ಸಂಸ್ಥೆಗಳು ಮತ್ತು ಊರವರ ಶ್ರಮದಾನದಿಂದ ಪುನರ್ ನಿರ್ಮಾಣಗೊಂಡಿದೆ.

ಆ. 13ರಂದು ಸುರಿದ ರಣಭೀಕರ ಮಳೆಗೆ ಎಡಮಂಗಲ ಗ್ರಾಮದ ಮಾಲೆಂಗಿರಿ ಸೇತುವೆಯ ಅಡಿಭಾಗ ಕೊಚ್ಚಿ ಹೋಗಿ ಎಡಮಂಗಲ ಸಂಪರ್ಕ ಕಡಿತಗೊಂಡಿದ್ದು, ಶಾಸಕರ ಅನುದಾನದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡು ಅದೂ ಕೊಚ್ಚಿ ಹೋಗಿ ಈಗ ಸಂಘ ಸಂಸ್ಥೆಗಳ ನೆರವಿನಿಂದ ಊರವರ ಶ್ರಮದಾನದ ಮೂಲಕ ಸೆ. 5ರಿಂದ ಮರು ಸಂಪರ್ಕ ಸಾಧ್ಯವಾಗಿದೆ.
ಎಡಮಂಗಲ ಹಾಲು‌ ಸೊಸೈಟಿ ಮತ್ತಿತರ ಸಂಘ ಸಂಸ್ಥೆಗಳ ನೆರವಿನಿಂದ ಊರವರು ಶ್ರಮದಾನದಿಂದ ಮತ್ತೆ ಎರಡು ಮೋರಿಗಳನ್ನು ಜೋಡಿಸಿ ಕಲ್ಲು ಕಟ್ಟಿ ಮರಳು ಚೀಲಗಳನ್ನು ಇಟ್ಟು ಸಂಪರ್ಕ ಕಲ್ಪಿಸಲಾಗಿದೆ. ಸೆ. 5ರಂದು ಸಂಜೆ ಎಡಮಂಗಲಕ್ಕೆ ಬಸ್ ಹೋಗಿರುವುದಾಗಿ ತಿಳಿದುಬಂದಿದೆ.