ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ

0

ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆಯು ಸೆ.7ರಂದು ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಗಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಪವಿತ್ರ ಪಾಣಿ ಕೆ. ಜೆ ಗೋಪಾಲ ಕೃಷ್ಣ ಭಟ್ , ಪದ್ಮಯ್ಯ ಬಿ. ಆರ್, ವಿಜಯ ಕನ್ಯಾನ, ರಿತಿನ್ ಡೆಮ್ಮಲೆ, ಮುರಳೀಧರ ಭಟ್ ಕೀಲಾರು, ಹೇಮಾವತಿ, ಭಾರತಿ , ವಿಮಲ, ಕೊರಗಪ್ಪ ಅರಮನೆ ತೋಟ, ಜೀರ್ಣೋದ್ದಾರ ಸಮಿತಿಯ ಆಡಳಿತ ಮಂಡಳಿಯ
ಶ್ರೀಧರ ಪಡ್ಪು, , ಪ್ರೀತಮ್ ಬಂಟೋಡಿ, ಪುರುಷೋತ್ತಮ ಬಾಳೆಹಿತ್ಲು, ರಾಜಾರಾಮ ಕಳಗಿ
ಮೋಹನ್ ಬಾಳೆಕಜೆ ಸೇರಿದಂತೆ
ಸರ್ವ ಸದಸ್ಯರು, ಹಾಗೂ ದೇವರಾರಾಧನ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು , ಊರು ಪರವೂರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.