ಅಂತರ್ ರಾಷ್ಟೀಯ ಕರಾಟೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ

0

ಮಂಗಳೂರಿನ ಕೋರ್ಡಲ್ ಹಾಲ್ ನಲ್ಲಿ ಸೆ. 6 ರಿಂದ ಸೆ. 8 ರ ವರೆಗೆ ನಡೆದ ಅಂತರ್ ರಾಷ್ಟೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಾಲ್ಸೂರು ಗ್ರಾಮದ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕರಾಟೆಸ್ಪರ್ಧೆಯ 41 ಕೆ. ಜಿ ವಿಭಾಗದಲ್ಲಿ ಜಶ್ವಿತ್ ಕೋನಡ್ಕಪದವು ಅವರು ಪ್ರಥಮ ಸ್ಥಾನವನ್ನು ಹಾಗೂ 59 ಕೆಜಿ ವಿಭಾಗದ ಕಟಾ ಸ್ಪರ್ಧೆಯಲ್ಲಿ ಸೌಜನ್ ಬೊಳುಗಲ್ಲು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಜಶ್ವಿತ್ ಹಾಗೂ ಸೌಜನ್ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.

ಜಶ್ಬಿತ್ ಜಾಲ್ಸೂರು ಗ್ರಾಮದ ಕೋನಡ್ಕಪದವು ವಾಸುದೇವ ಮತ್ತು ಶ್ರೀಮತಿ ಆಶಾಲತಾ ದಂಪತಿಯ ಪುತ್ರ. ಸೌಜನ್ ಮಂಡೆಕೋಲು ಗ್ರಾಮದ ಬೊಳುಗಲ್ಲು ಚನಿಯಪ್ಪ ಗೌಡ ಹಾಗೂ ಶ್ರೀಮತಿ ಬೇಬಿ ದಂಪತಿಯ ಪುತ್ರ. ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ಈ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿದ್ದಾರೆ.