ನಿಡ್ವಾಳದ ವಿಷ್ಣು ಸೇವಾ ಶಕ್ತಿ  ಸಂಘದ  ಟಿ ಶರ್ಟ್ ಬಿಡುಗಡೆಗೊಳಿಸಿದ ಶಾಸಕಿ ಭಾಗೀರಥಿ ಮುರುಳ್ಯ

0

ವಿಷ್ಣು ಸೇವಾ ಶಕ್ತಿ ನಿಡ್ವಾಳ (ರಿ) ಸಂಘಟನೆಯ ಟಿ ಶರ್ಟ್ ನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಸೆ.10 ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಹಿರಿಯರಾದ ಡಾ. ರಾಮಯ್ಯ ಭಟ್, ಶಿವರಾಮಯ್ಯ, ಪ್ರಮುಖರಾದ ಚಂದ್ರಶೇಖರ ಶಾಸ್ತ್ರಿ, ದಯಾನಂದ ಮೇಲ್ಮನೆ, ಲೋಕೇಶ್ ಬರೆಮೇಲು, ಕಾರ್ಯಪ್ಪ ಗೌಡ ಚಿದ್ದಲ್, ಲಿಗೋಧರ ಆಚಾರ್ಯ, ನಾರಾಯಣ ಕೃಷ್ಣನಗರ, ವಿಜಯಲಕ್ಷ್ಮಿ ಜಳಕದ ಹೊಳೆ, ನಿಡ್ವಾಳ ವಿಷ್ಣು ಸೇವಾ ಶಕ್ತಿ ಸಂಘದ ಅಧ್ಯಕ್ಷರಾದ ಲತೀಶ್ ಅಲೆಂಗಾರ, ಕಾರ್ಯದರ್ಶಿ ಪವನ್ ಅತ್ಯಡ್ಕ ಹಾಗೂ ವಿಷ್ಣು ಸೇವಾ ಶಕ್ತಿ ಸಂಘದ ಸದಸ್ಯರುಗಳು ಮತ್ತು ಊರವರು ಉಪಸ್ಥಿತರಿದ್ದರು.