ಜಟ್ಟಿಪಳ್ಳ ಮಿಲಾದ್ ಸಂಗಮ

0

ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ವತಿಯಿಂದ ಬುಸ್ತಾನುಲ್ ಉಲೂಂ ಮದರಸ ಜಟ್ಟಿಪಳ್ಳ, ಇದರ ಸುನ್ನಿ ಬಾಲ ಸಂಘ ಇದರ ಸಹಯೋಗದೊಂದಿಗೆ ಈದ್ ಮಿಲಾದ್ ಕಾಲ್ನಡಿಗೆ ಜಾಥ ನಡೆಯಿತು.

ಜಟ್ಟಿಪಳ್ಳ ಮಸೀದಿ ಮುಂಭಾಗದಿಂದ ಜಾಥ ಆರಂಭಗೊಂಡಿತು.


ಮದರಸ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಸಹ ಉಸ್ತಾದ್ ಸಿರಾಜುದ್ದೀನ್ ಸಹದಿ ರವರ ದುವಾಃಶಿರ್ವಚನದೊಂದಿಗೆ ಕಮೀಟಿ ಗೌರವ ಅಧ್ಯಕ್ಷ ಅಬೂಬಕರ್ ಕೆ.ಎ, ಕಮೀಟಿ ಅಧ್ಯಕ್ಷ ಬಶೀರ್ ಬಾಲೆಮಕ್ಕಿ,ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಎನ್ ಎ ಅಬ್ದುಲ್ಲಾ ಹಾಗೂ ಜಮಾಅತ್ ಹಿರಿಯರ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಕ್ಕೆಚಾಲನೆ ನಿಡಲಾಯಿತು.

ಜಟ್ಟಿಪಳ್ಳ ಮಸೀದಿ ಆವರಣದಿಂದ ಆರಂಭಗೊಂಡು ಸುಳ್ಯ ಎಸ್ ವಿ ಎಂ ಆಸ್ಪತ್ರೆ ಬಳಿಯಿಂದ ಶ್ರೀ ರಾಮ ಪೇಟೆಯಾಗಿ ಸುಳ್ಯ ನಗರದಲ್ಲಿ ಮುಖ್ಯ ಹೆದ್ದಾರಿಯಲ್ಲಿ ಸಾಗಿ ಗಾಂಧಿನಗರ ಪೆಟ್ರೋಲ್ ಪಂಪ್ ವರೆಗೆ ಸಾಗಿ ನಂತರ ಗಾಂಧಿನಗರ ಮಸೀದಿಯ ಮುಂಬಾಗ ನಾವೂರು ರಸ್ತೆಯಾಗಿ ಜಟ್ಟಿಪಳ್ಳ ಕೊಡಿಯಾಲ ಬೈಲು ಡಿಗ್ರಿ ಕಾಲೇಜು ರಸ್ತೆಯಾಗಿ ಸಾಗಿ ಕೊನೆಗೆ ಜಟ್ಟಿಪಳ್ಳ ಮಸೀದಿಗೆ ಹಿಂದುರುಗಿ ಕೊನೆಗೆ ಕಾಲ್ನಡಿಗೆ ಜಾಥ ಸಮಾಪನಗೊಂಡಿತು.

ಜಾಥ ಉದ್ದಕ್ಕು ವಿದ್ಯಾರ್ಥಿಗಳ ದಫ್ ಪ್ರದರ್ಶನ, ಭಕ್ತಿ ಗೀತೆಗಳು , ಸ್ವಲಾತ್, ನಾಹತ್ ಗೀತೆಗಳ ಮೂಲಕ ಪ್ರವಾದಿ ಪ್ರೇಮ ಪ್ರದರ್ಶನ ಮಾಡಲಾಯಿತು.

ಕಾಲ್ನಡಿಗೆ ಜಾಥವಾಗಿ ಸಾಗಿ ಹೋಗುವ ಸಂಧರ್ಭದಲ್ಲಿ ಗಾಂಧಿನಗರ ಮಸೀದಿಯ ಮುಂಬಾಗ ತಂಪು ಪಾನಿಯ ವಿತರಿಸಿ ಸ್ವಾಗತಿಸಿದರು ಅದಲ್ಲದೇ ಸಾರ್ವಜನಿಕರು ಅಲ್ಲಲ್ಲಿ ತಿಂಡಿ ತಿನಿಸುಗಳು ಕೂಡ ನೀಡಿ ಸಾರ್ವಜನಿಕರು ಪ್ರೀತಿಯಿಂದ ಸ್ವಾಗತಿಸಿದರು.