ಬಾಳುಗೋಡು : ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಕರ್ನಾಟಕ ಹಾಲು ಮಹಾಮಂಡಲಿ ಬೆಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇವರ ಜಂಟಿ ಆಶ್ರಯದಲ್ಲಿ ಕ್ಷೀರ ಸಂಜೀವಿನಿ ಯೊಜನೆಯಡಿ ಮಹಿಳೆಯರು ಆರೋಗ್ಯ ಮಾಹಿತಿ ಕಾರ್ಯಕ್ರಮವು ಸೆ. 20ರಂದು ಸಂಘದ ವಠಾರ ಬಸವನಗುಡಿ ಬಾಳುಗೋಡಿನಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬಾಳುಗೋಡು ಸಮುದಾಯ ಆರೋಗ್ಯ ಅಧಿಕಾರಿ ಶ್ರೀ ಮತಿ ಶ್ರುತಿ ಮಾತನಾಡಿ ಮಹಿಳೆಯರು ವಿಶೇಷವಾಗಿ ಆಯಾಯ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡು,ನಿಯಮಿತ ಉತ್ತಮ ಆಹಾರ ಪದ್ದತಿ, ಸ್ವಚ್ಚತೆ ಅದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅದ್ಯಕ್ಷೆ ಶರ್ಮಿಳಾ ಕಟ್ಟೆಮನೆ ವಹಿಸಿದ್ದರು.
ವೇದಿಕೆಯಲ್ಲಿ ದ.ಕ ಹಾಲು ಒಕ್ಕೂಟ ಮಂಗಳೂರು,ಸುಳ್ಯ ತಾಲೂಕು ವಿಸ್ತರಣಾಧಿಕಾರಿ ಹರೀಶ್ ಕುಮಾರ್,ದ.ಕ ಹಾಲು ಒಕ್ಕೂಟ ಮಂಗಳೂರು ಎನ್ ಆರ್ ಎಲ್ ಎಮ್ ಅಧಿಕಾರಿ ಶ್ರೀ ಮತಿ ನಳಿನಿ, ಸಂಜಿವಿನಿ ಒಕ್ಕೂಟದ ಎಮ್ ಬಿ ಕೆ ವೇದಾವತಿ ಕಲ್ಲೇಮಠ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಉಷಾ ಪ್ರಭಾಕರ್ ಸ್ವಾಗತಿಸಿ ವನಿತರವರು ದನ್ಯವಾದಗೈದರು.