ಬೆಂಗಳೂರು ಬಸ್ ನಲ್ಲಿ ಯುವತಿಗೆ ಕಿರುಕುಳ – ಸುಳ್ಯದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ

0

ಇತ್ತಂಡದ ಮೇಲೆ ಪೋಲೀಸರಿಂದ ಕೇಸು ದಾಖಲು

ಹಿಂದು ಸಂಘಟನೆಯ ಇಬ್ಬರ ಬಂಧನ – ನ್ಯಾಯಾಂಗ ಬಂಧನ

ನಿನ್ನೆ ಬೆಳಿಗ್ಗೆ ಬೆಂಗಳೂರಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್ ನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಯುವಕನೊಬ್ಬ ಸುಳ್ಯಕ್ಕೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದನೆನ್ನಲಾದ ಹಾಗೂ ಇದನ್ನು ತಿಳಿದ ಆಕೆಯ ಕಾಲೇಜು ಯುವಕರು ಸುಳ್ಯದಲ್ಲಿ ಆ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೋಲೀಸರು ಎರಡೂ ಕಡೆಯವರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ನಿಯಾಜ್ ಎಂಬ ಆ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹಿಂದು ಸಂಘಟನೆಯ ಇಬ್ಬರು ಮುಖಂಡರನ್ನು ಪೋಲೀಸರು ಬಂಧಿಸಿದ್ದಾರೆ.

ಭಜರಂಗದಳದ ವರ್ಷಿತ್ ಚೊಕ್ಕಾಡಿ ಮತ್ತು ಮಿಥುನ್ ಎಂಬವರ ಮೇಲೆ ಸೆಕ್ಷನ್ 307 ಪ್ರಕಾರ ದಾಖಲಿಸಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿದ್ಯಾರ್ಥಿನಿಯಿಂದ ದೂರು

ಬಸ್ಸಲ್ಲಿ ನಿಯಾಜ್ ಎಂಬ ಯುವಕ ತನ್ನನ್ನು ತಬ್ಬಿಕೊಳ್ಳಲು ಪ್ರಯತ್ನ ಪಟ್ಟು ಮಾನಕ್ಕೆ ಭಂಗ ತಂದುದಲ್ಲದೆ, ಜೀವಬೆದರಿಕೆ ಒಡ್ಡಿರುವುದಾಗಿ ಕಾಲೇಜು ವಿದ್ಯಾರ್ಥಿನಿ ಸುಳ್ಯ ಪೋಲೀಸರಿಗೆ ದೂರು ನೀಡಿದ್ದು ಅದನ್ನೂ ಪೋಲೀಸರು ದಾಖಲಿಸಿಕೊಂಡಿದ್ದಾರೆ.