ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಕರಾಟೆ ಸ್ಪರ್ಧೆಯಲ್ಲಿ ಜ್ಞಾನದೀಪ ಶಾಲಾ ವಿದ್ಯಾರ್ಥಿ ಚೇತನ್ ಮುಂಡೋಡಿ ರಾಜ್ಯಮಟ್ಟಕ್ಕೆ

0

ದ. ಕ.ಜಿ. ಪಂ.ಉಪನಿರ್ದೇಶಕರ ಕಚೇರಿ ಹಾಗೂ ಎಸ್. ಡಿ. ಎಮ್. ಮಂಗಳ ಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಇವುಗಳ ಆಶ್ರಯದಲ್ಲಿ ವಾಮoಜೂರು ಮಂಗಳೂರಿನಲ್ಲಿ ಸೆ. 25ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಿದ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯ ವಿದ್ಯಾರ್ಥಿ ಚೇತನ್ ಮುಂಡೋಡಿ ಹತ್ತನೇ ತರಗತಿ 45 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅಲ್ಲದೆ ಏಳನೇ ತರಗತಿ ವಿದ್ಯಾರ್ಥಿನಿ ಪ್ರಜ್ಞ ಗುಡ್ಡನಮನೆ ದ್ವಿತೀಯ ಸ್ಥಾನ ಪಡೆದರೆ, ಅನ್ಸಿಕಾ 7ನೇ ತರಗತಿ ತೃತೀಯ ಸ್ಥಾನ ಪಡೆದಿರುತ್ತಾರೆ.