ಕಸಾಪ ವತಿಯಿಂದ ಹರಿಹರ ಕ್ಲಷ್ಟರ್ ನ 10 ಶಾಲೆಗಳಿಗೆ ಜ್ಞಾನಪೀಠ ಪುರಸ್ಕ್ರತರ ಭಾವಚಿತ್ರ ವಿತರಣೆ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸುಳ್ಯ ಮತ್ತು ಪಂಜ ಹೋಬಳಿ ಘಟಕಗಳ ಆಶ್ರಯದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಹರಿಹರ ಪಲ್ಲತ್ತಡ್ಕ ಕ್ಲಸ್ಟರ್ ನ 10 ಶಾಲೆಗಳಿಗೆ ಜ್ಞಾನ ಪೀಠ ಪುರಸ್ಕ್ರತ ಸಾಹಿತಿಗಳ ಭಾವಚಿತ್ರ ಹಾಗೂ ಪುಸ್ತಕಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಪರಿಷತ್ತಿನ ಅದ್ಯಕ್ಷ ರಾದ ಚಂದ್ರಶೇಖರ್ ಪೇರಾಲ್ ಇವರು ವಹಿಸಿದರು. 5 ಶಾಲೆಗಳಿಗೆ ಪ್ರಾಯೋಜಕರಾದ ಕು ಸಿ ಲೋಕಯ್ಯ ಇವರು ಭಾವಚಿತ್ರಗಳನ್ನು ಶಾಲಾ ಮುಖ್ಯಸ್ಥರಿಗೆ ಹಾಗು ಹರಿಹರ ಕೊಲ್ಲಮೊಗ್ರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು ಇವರು 5 ಶಾಲೆಗಳಿಗೆ ಭಾವಚಿತ್ರ ಹಸ್ತಾಂತರಿಸಿದರು. ನ್ಯಾಯವಾದಿಗಳಾದ ಪ್ರದೀಪ್ ಕೆ ಎಲ್ ಇವರು ಲೇಖನ ಸಾಮಾಗ್ರಿಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ , ಕೋಶಾಧಿಕಾರಿ ಪ್ರಭಾಕರ ಕಿರಿಭಾಗ, ತಾಲುಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ , ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ ಹಾಗು ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಒಟ್ಟು105 ಶಾಲೆಗಳಲ್ಲಿ ಈ ಯೋಜನೆಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.