ಕನಕಮಜಲು: ಕುದ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಆನೆ ದಾಳಿ ಕೃಷಿ ನಾಶ

0

ಕನಕಮಜಲು ಗ್ರಾಮದ ಕುದ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆ ನಾಶಗೊಂಡ ಘಟನೆ ಅ.1ರಂದು ರಾತ್ರಿ ಸಂಭವಿಸಿದೆ.


ಲೋಹಿತ್ ಕುಮಾರ್ ಕುದ್ಕುಳಿ ಅವರ ಕೃಷಿ ತೋಟದಲ್ಲಿ ಎಂಟು ತೆಂಗಿನ ಗಿಡ, ಒಂದು ದೊಡ್ಡ ತೆಂಗಿನ ಮರ, ಇಪ್ಪತ್ತೈದಕ್ಕೂ ಅಧಿಕ ಬಾಳೆ, ಐದಾರು ಅಡಿಕೆ ಸಸಿಗಳಿಗೆ ಹಾನಿ ನಡೆಸಿದ್ದು, ಕೃಷಿ ಬೆಳೆ ನಾಶಗೊಂಡಿದೆ.
ಕೊರಂಬಡ್ಕ ಪದ್ಮನಾಭ ಗೌಡರ ಕೃಷಿ ತೋಟಕ್ಕೂ ದಾಳಿ ನಡೆಸಿದ್ದು, ಕೃಷಿ ಬೆಳೆಗಳನ್ನು ನಾಶಪಡಿಸಿರುವುದಾಗಿ ತಿಳಿದುಬಂದಿದೆ.