ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಆಲೆಟ್ಟಿ ಪ್ರೌಢಶಾಲಾ ವಿದ್ಯಾರ್ಥಿನಿ ಕು. ಪೂರ್ವಿತಾ ಕೆ.ವಿ ಗೆ ಪ್ರಥಮ ಬಹುಮಾನ

0

ದ.ಕ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕು.ಪೂರ್ವಿತಾ ಕೆ.ವಿ.ಪ್ರಥಮ ಸ್ಥಾನಿಯಾಗಿದ್ದು ಇಂದು ಮಂಗಳೂರಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದ ಸಮಾರಂಭದಲ್ಲಿ ಬಹುಮಾನವನ್ನು ಪಡೆದುಕೊಂಡರು.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
ಈಕೆ ಆಲೆಟ್ಟಿ
ಗ್ರಾಮದ ಕೂರ್ನಡ್ಕದ ವಿವೇಕಾನಂದ ಮತ್ತು ಕೃಷ್ಣವೇಣಿ ದಂಪತಿಯ ಪುತ್ರಿ.