ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜು ರಕ್ಷಕ -ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆ

0

ಕಾಲೇಜು ಬಗ್ಗೆ ಬೇಡಿಕೆಗಳ ಮನವಿ ನೀಡಲು ನಿರ್ಧಾರ

ಕೆ. ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿನ ರಕ್ಷಕ -ಶಿಕ್ಷಕ ಸಂಘದ ಸಭೆ ಅಧ್ಯಕ್ಷರಾದ ಶ್ರೀಮತಿ ಸಾಯಿಗೀತ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಪದನಿಮಿತ್ತ ಕಾರ್ಯದರ್ಶಿಗಳಾದ ಪ್ರಾಚಾರ್ಯರಾದ ಡಾ.ದಿನೇಶ.ಪಿ.ಟಿ. ಉಪಸ್ಥಿತರಿದ್ದರು.

ಸಭೆಯಲ್ಲಿ 2024-25ನೇ ವರ್ಷದಲ್ಲಿ ಸಂಘದ ವತಿಯಿಂದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶಿವರಾಮರೈ, ನೀಲಪ್ಪಗೌಡ, ರವಿಕಕ್ಕೆಪದವು, ಭವಾನಿಶಂಕರ್, ನಾಗೇಶ್, ಶ್ರೀಮತಿ ರೇವತಿ ಆಚಳ್ಳಿ,
ಶ್ರೀಮತಿ ರೇವತಿ ಉಪಸ್ಥಿತರಿದ್ದರು. ಶಿಕ್ಷಕೇತರ ಪ್ರತಿನಿಧಿ ಮಮತ, ಆಂತರಿಕ ಗುಣಮಟ್ಟ ಭರವಸಾ ಕೋಶದ ಲಸಂಯೋಜಕರಾದ ಶ್ರೀಮತಿ ಲತಾ.ಬಿ.ಟಿ. ಶಿಕ್ಷಕರ ಪ್ರತಿನಿಧಿಗಳಾಗಿ ಶ್ರೀ.ಉದಯಕುಮಾರ್ ಮತ್ತು ರಮಾನಾಥ.ಎ ಉಪಸ್ಥಿತರಿದ್ದರು.


ಕಾಲೇಜು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಗಿ ಕೆ.ಎಸ್.ಎಸ್ ಕಾಲೇಜಿಗೆ ಬರುವ ಅತಿ ಬಡವರಿಗೆ ಯೂನಿಫಾರ್ಮ್ ನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಒದಗಿಸುವಂತೆ, ಕಾಲೇಜಿನಲ್ಲಿರುವ ಕಬಡ್ಡಿ ಮ್ಯಾಟ್ ಇಡಲು ಖಾಯಂ ಶೆಡ್ ಮಾಡಿಕೊಡುವಂತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪೂರ್ತಿ ಗೊಳಿಸಿಕೊಡುವಂತೆ ಮನವಿ ನೀಡುವುದಾಗಿ ನಿರ್ಣಯಿಸಲಾಯಿತು.