ಸುಬ್ರಹ್ಮಣ್ಯ : ಗಾಂಧಿ ಜಯಂತಿ ಪ್ರಯುಕ್ತ ಆಶ್ರಮಕ್ಕೆ ಅಕ್ಕಿ ಕೊಡುಗೆ

0

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಆಶ್ರಮಕ್ಕೆ ಅಕ್ಕಿ ಕೊಡುಗೆ ನೀಡಲಾಯಿತು.

ವಿಕಲ ಚೇತನ ಮತ್ತು ಅನಾಥ ಮಹಿಳಾ ಆಶ್ರಮ ನೂಜಿ ಬಾಳ್ತಿಲ ಇಲ್ಲಿಗೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಒಂದು ಕಿಂಟ್ವಾಲ್ ಅಕ್ಕಿ ನೀಡಲಾಯಿತು. ಈ ಸಂದರ್ಭ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ ಅಧ್ಯಕ್ಷ ರಾಜೇಶ್ ಎನ್ ಎಸ್, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕೃಷ್ಣ ಕುಮಾರ್ ಬಾಳುಗೋಡು, ಮೋಹನದಾಸ್ ರೈ, ಭಾರತಿ ದಿನೇಶ್, ವಿಮಲಾ ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.