ಅರಣ್ಯ ಇಲಾಖೆಯಿಂದ ಸುಳ್ಯದಲ್ಲಿ ವನ್ಯಜೀವಿ ಸಪ್ತಾಹ ಪ್ರಯುಕ್ತ

0

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ – ‘ವನ್ಯ ಚಿತ್ತಾರ’

ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ, ದ.ಕ. ಜಿಲ್ಲೆ ಇದರ ವತಿಯಿಂದ

ವನ್ಯಜೀವಿ ಸಪ್ತಾಹ- 2024ರ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ- ವನ್ಯ ಚಿತ್ತಾರ-2024 ಅ. 05 ರಂದು ಸುಳ್ಯ ಸರಕಾರಿ ಮಾದರಿ ಶಾಲೆಯಲ್ಲಿ ನಡೆಯಿತು.

ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವನ್ಯ ಜೀವಿ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.

ಸ್ಪರ್ಧಾ ವಿಭಾಗ

1 ರಿಂದ 2ನೇ ತರಗತಿ
3 ರಿಂದ 4 ನೇ ತರಗತಿ
5 ರಿಂದ 7 ನೇ ತರಗತಿ
8 ರಿಂದ 10 ನೇ ತರಗತಿ
ಪ್ರತ್ಯೇಕ ವಿಭಾಗಗಳಲ್ಲಿಪರಿಸರ ಮತ್ತು ವನ್ಯಜೀವಿ‌ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಿದ್ದು ವಿವಿಧ ಶಾಲೆಗಳಿಂದ 73 ಮಕ್ಕಳು ಭಾಗವಹಿಸಿದ್ದರು..
ವಿಜೇತರ ಹೆಸರುಗಳನ್ನು ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಪ್ರಕಟಿಸಲಾಗುವುದು.
ವಿಜೇತರಿಗೆ ಬಹುಮಾನಗಳನ್ನು ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ದ ವಾರ್ಷಿಕ ಮಹಾಸಭೆಯಲ್ಲಿ ವಿತರಿಸಲಾಗುವುದು.