ಎಲಿಮಲೆ : ದುರ್ಗಾಷ್ಟಮಿ ಹಾಗೂ ಶಸ್ತ್ರ ಪೂಜೆ

0

ವಿಶ್ವ ಹಿಂದೂ ಪರಿಷತ್ ದುರ್ಗಾ ವಾಹಿನಿ ಮಾತೃ ಶಕ್ತಿ ಅಯೋದ್ಯೆ ಘಟಕ ಎಲಿಮಲೆ ಹಾಗೂ ಆಂಜನೇಯ ಘಟಕ ತಲೂರು ಇದರ ಆಶ್ರಯದಲ್ಲಿ ದುರ್ಗಾಷ್ಟಮಿ ಹಾಗೂ ಶಸ್ತ್ರ ಪೂಜೆ ಎಲಿಮಲೆ ಯಲ್ಲಿ ಆ.10ರಂದು ನಡೆಯಿತು. ಜಿಲ್ಲಾ ದುರ್ಗಾ ವಾಹಿನಿ ಸಂಯೋಜಕಿ ಗೀತಾ ಕಡಬ ಇವರು ದುರ್ಗಾಷ್ಟಮಿ ಹಾಗೂ ಶಸ್ತ್ರ ಪೂಜೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ಸಂಯೋಜ ಹರಿಪ್ರಸಾದ್ ಎಲಿ ಮಲೆ, ತಾಲ್ಲೂಕು ಮಾತೃ ಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ ಚೋಡಿಪನ್ನೇ, ಎಲಿಮಲೆ ಘಟಕದ ಮಾತೃ ಶಕ್ತಿ ಸಂಯೋಜಕಿ ಶಶಿಕಲಾ ಕಾಡುಜಬಳೆ, ದುರ್ಗಾವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ, ತಲೂರು ದುರ್ಗಾವಾಹಿನಿ ಸಂಯೋಜಕಿ ಯಶೋದಾ ಪಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿಜೆಪಿ ಗುತ್ತಿಗಾರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಕೃಷ್ಣಾಯ್ಯ ಮೂಲೆತೋಟ, ತಾರಾನಾಥ್ ಆಡಿಗೈ ಹಾಗೂ ದುರ್ಗಾ ವಾಹಿನಿ ಮಾತೃ ಶಕ್ತಿಯ ಪದಾಧಿಕಾರಿಗಳು ಹಾಗೂ ಮಾತೆಯರು ಉಪಸ್ಥಿತರಿದ್ದರು. ಪ್ರಮುಖರಾದ ಸವಿತಾ ಕಾಯರ ಸ್ವಾಗತಿಸಿದರು. ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು.