ಸುಳ್ಯ ದಸರಾ ಉತ್ಸವದಲ್ಲಿ ಭಜನೋತ್ಸವಕ್ಕೆ ಚಾಲನೆ

0

ಸುಳ್ಯ ದಸರಾ ಉತ್ಸವದಲ್ಲಿ ಇಂದು ಬೆಳಗ್ಗಿನಿಂದ ಸಂಧ್ಯಾ ಕಾಲದ ತನಕ ತಾಲೂಕಿನ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದ್ದು ಭಜನಾ ಸಂಕೀರ್ತನೆಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು.


ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ರವರು ದೀಪ ಪ್ರಜ್ವಲಿಸಿದರು. ಎಸ್.ಸಿಕ್ಸ್ ಅಧ್ಯಕ್ಷ ನಾರಾಯಣ ಕೇಕಡ್ಕ ,ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ,ಶಿಕ್ಷಕ ದೇವಿಪ್ರಸಾದ್ ಕಾಯರ್ತೋಡಿ, ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.


ಬಳಿಕ ಕುಳಿತು ಭಜನಾ ಸಂಕೀರ್ತನೆಯು ಆರಂಭಗೊಂಡಿತು. ಅಪರಾಹ್ನ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನಾ ಪ್ರದರ್ಶನ ವಾಗಲಿರುವುದು.